Sunday, May 5, 2024
Homeಕರಾವಳಿಬಂಟ್ವಾಳ: ಮೆಸೇಜ್ ಮಾಡಿಲ್ಲ‌ ಎಂದು ಮಹಿಳೆಯ ಕೊಲೆ‌ ಯತ್ನ‌ ಪ್ರಕರಣ: ಆರೋಪಿ ಬಂಧನ

ಬಂಟ್ವಾಳ: ಮೆಸೇಜ್ ಮಾಡಿಲ್ಲ‌ ಎಂದು ಮಹಿಳೆಯ ಕೊಲೆ‌ ಯತ್ನ‌ ಪ್ರಕರಣ: ಆರೋಪಿ ಬಂಧನ

spot_img
- Advertisement -
- Advertisement -

ಬಂಟ್ವಾಳ: ಮಹಿಳೆಯೊಬ್ಬರು ಮೆಸೇಜ್ , ಕಾಲ್ ಮಾಡಿಲ್ಲ‌ ಎಂದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣಾ ಎಸ್.ಐ‌.ಹರೀಶ್ ನೇತೃತ್ವದ ತಂಡ ಜುಲೈ 19 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಪಲ್ಲಿಪಾಡಿ ನಿವಾಸಿ ರಮೇಶ್ ಬಂಧಿತ ಆರೋಪಿ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಟ್ವಾಳ ತಾಲೂಕಿನ ಪಿಲಿಮೊಗರು ಗ್ರಾಮದ ಪರವರಕೋಡಿ ಎಂಬಲ್ಲಿ ಈ ಘಟನೆ ನಡೆದಿತ್ತು.
ಪಿಲಿಮೊಗರು ನಿವಾಸಿ ಉಮೇಶ್ ಎಂಬವರ ಪತ್ನಿ ಲತಾ ಅವರು ರಮೇಶ್ ಗೆ ಸಂಬಂಧಿಕನಾಗಿದ್ದು, ಲತಾ ಅವರು ತನಗೆ ಮೆಸೇಜ್, ಕಾಲ್ ಮಾಡೋದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದಕ್ಕೆ ಮನೆಗೆ ನುಗ್ಗಿ ಕೊಲ್ಲಲು ಯತ್ನಿಸಿದ್ದ. ಗಾಯಗೊಂಡಿರುವ ಲತಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲೆಯತ್ನ ನಡೆಸಿ ದ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!