- Advertisement -
- Advertisement -
ಉಪ್ಪಿನಂಗಡಿ; ಈದ್ ಹಬ್ಬಕ್ಕೆ ಗೆಳತಿಯ ಮನೆಗೆ ಹಿಂದೂ ಯುವತಿಯೊಬ್ಬಳು ತೆರಳಿದ್ದಕ್ಕೆ ಹಿಂದೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಘಟನೆ
ಕಡಬ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ರಾಮನಗರ ನಿವಾಸಿ ಕಾವ್ಯ ಎಂಬ ಯುವತಿ ಕುದ್ಲೂರಿನ ಸಂಶೀನಾ ಎಂಬ ಸ್ನೇಹಿತೆಯ ಮನೆಗೆ ಬಕ್ರೀದ್ ಹಬ್ಬಕ್ಕೆ ತೆರಳಿದ್ದರು. ಸಂಶೀನಾ ಜೊತೆ ಕಾವ್ಯ ತೆರಳುವುದನ್ನು ಗಮನಿಸಿ ಕೆಲ ಸಂಘಟನೆಯ ಕಾರ್ಯಕರ್ತರು ಸಂಶೀನ ಮನೆ ಸಮೀಪದಲ್ಲಿ ಜಮಾಯಿಸಿದ್ದಾರೆ. ಬಳಿಕ ಮನೆಗೆ ಆಗಮಿಸಿದ ಪೊಲೀಸರು ಸಂಶೀನಾರ ಸಹೋದರ ಝಿಯಾದ್ ಬಗ್ಗೆ ವಿಚಾರಿಸಿದಾಗ ಆತ ಬೆಂಗಳೂರಿನಲ್ಲಿ ಇರುವುದು ಗೊತ್ತಾಗಿದೆ.
ಬಳಿಕ ಯುವತಿಯನ್ನು ಪೊಲೀಸರು ಆಕೆಯ ಅಣ್ಣನ ಜೊತೆ ಕಳುಹಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ ಪ್ರಕರಣದ ಬಗ್ಗೆ ವಿಚಾರಿಸಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಯುವತಿಯನ್ನು ಅಣ್ಣನ ಜೊತೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
- Advertisement -