Thursday, April 25, 2024
Homeಕರಾವಳಿಉಪ್ಪಿನಂಗಡಿ;ಈದ್ ಹಬ್ಬಕ್ಕೆ ಗೆಳತಿಯ ಮನೆಗೆ ತೆರಳಿದ ಹಿಂದೂ ಯುವತಿ: ಹಿಂದೂ‌ ಕಾರ್ಯಕರ್ತರಿಂದ ವಿರೋಧ

ಉಪ್ಪಿನಂಗಡಿ;ಈದ್ ಹಬ್ಬಕ್ಕೆ ಗೆಳತಿಯ ಮನೆಗೆ ತೆರಳಿದ ಹಿಂದೂ ಯುವತಿ: ಹಿಂದೂ‌ ಕಾರ್ಯಕರ್ತರಿಂದ ವಿರೋಧ

spot_img
- Advertisement -
- Advertisement -

ಉಪ್ಪಿನಂಗಡಿ; ಈದ್ ಹಬ್ಬಕ್ಕೆ ಗೆಳತಿಯ ಮನೆಗೆ ಹಿಂದೂ ಯುವತಿಯೊಬ್ಬಳು ತೆರಳಿದ್ದಕ್ಕೆ ಹಿಂದೂ‌ ಕಾರ್ಯಕರ್ತರು ವಿರೋಧ‌ ವ್ಯಕ್ತಪಡಿಸಿದ ಘಟನೆ
ಕಡಬ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉಪ್ಪಿನಂಗಡಿ ರಾಮನಗರ ನಿವಾಸಿ ಕಾವ್ಯ ಎಂಬ ಯುವತಿ ​ ಕುದ್ಲೂರಿನ ಸಂಶೀನಾ ಎಂಬ ಸ್ನೇಹಿತೆಯ ಮನೆಗೆ ಬಕ್ರೀದ್ ಹಬ್ಬಕ್ಕೆ ತೆರಳಿದ್ದರು. ಸಂಶೀನಾ ಜೊತೆ ಕಾವ್ಯ ತೆರಳುವುದನ್ನು ಗಮನಿಸಿ ಕೆಲ ಸಂಘಟನೆಯ ಕಾರ್ಯಕರ್ತರು ಸಂಶೀನ ಮನೆ ಸಮೀಪದಲ್ಲಿ ಜಮಾಯಿಸಿದ್ದಾರೆ‌. ಬಳಿಕ‌ ಮನೆಗೆ ಆಗಮಿಸಿದ ಪೊಲೀಸರು ​​ಸಂಶೀನಾರ ಸಹೋದರ ಝಿಯಾದ್ ಬಗ್ಗೆ ವಿಚಾರಿಸಿದಾಗ ಆತ ಬೆಂಗಳೂರಿನಲ್ಲಿ ಇರುವುದು ಗೊತ್ತಾಗಿದೆ.

ಬಳಿಕ ಯುವತಿಯನ್ನು ಪೊಲೀಸರು ಆಕೆಯ ಅಣ್ಣನ ಜೊತೆ ಕಳುಹಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ ಪ್ರಕರಣದ ಬಗ್ಗೆ ವಿಚಾರಿಸಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಯುವತಿಯನ್ನು ಅಣ್ಣನ ಜೊತೆ ಕಳುಹಿಸಿಕೊಡಲಾಗಿದೆ‌ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!