ಕಾಸರಗೋಡು: ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಟ್ಟುಹಾಕಿ ಕೊಲೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕೃತ್ಯವನ್ನು ಎಸಗಿರುವ ವ್ಯಕ್ತಿ ಚೇಲಕ್ಕರದ ಚಕ್ಕನಪಾಡಿ ಮೂಲದ ಪುರುಷೋತ್ತಮನ್ (47) ಎಂಬಾತ. ಈತನ ವಿರುದ್ಧ ಸಾಕು ನಾಯಿಯನ್ನು ಕೊಂದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಸಾಕು ನಾಯಿಯ ಕುತ್ತಿಗೆ ಪಟ್ಟಿ ತುಂಡರಿಸಿ ಹೊರಗೆ ಹೋಗುತ್ತಿರುವ ಬಗ್ಗೆ ಪದೇ ಪದೇ ದೂರು ನೀಡುತ್ತಿದ್ದರು. ಇದಲ್ಲದೆ ಸಾಕು ನಾಯಿ ಆತನಿಗೆಯೇ ಕಚ್ಚಿದ್ದು ಇದರಿಂದ ಕೋಪಗೊಂಡ ವ್ಯಕ್ತಿಯ ನಾಯಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ನಾಯಿಗೆ ಹೊಡೆದ ನಂತರ ಜೀವಂತವಾಗಿ ಬೆಂಕಿ ಹಚ್ಚಿದ್ದು, ಅಸಹಾಯಕತೆಯಿಂದ ಓಡುತ್ತಿರುವುದನ್ನು ನೋಡಿದ ನಾಯಿಯನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನಾಯಿಯನ್ನು ಮನೆ ಆವರಣದಲ್ಲೇ ಹೂತು ಹಾಕಲಾಗಿತ್ತು. ಇತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.