Wednesday, May 1, 2024
Homeತಾಜಾ ಸುದ್ದಿಮಗನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಟ್ಟ ಕಟ್ಟಾ ಅಭಿಮಾನಿ

ಮಗನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಟ್ಟ ಕಟ್ಟಾ ಅಭಿಮಾನಿ

spot_img
- Advertisement -
- Advertisement -

ಕೊಪ್ಪಳ : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯೊಬ್ಬ ತನ್ನ ಮಗನಿಗೆ ಸಿದ್ದರಾಮಯ್ಯ ಅವರ ಹೆಸರಿಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರದ ರೈತ ಮಂಜುನಾಥ ಹಾಗು ಪತ್ನಿ ನೇತ್ರಾವತಿಯವರ ಮೊದಲು ಮಗುವಿಗೆ ಸಿದ್ದರಾಮಯ್ಯ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ್ದಾರೆ. ಮಂಜುನಾಥನಿಗೆ ಸಿದ್ದರಾಮಯ್ಯ ಬಗ್ಗೆ ಎಲ್ಲಿಲ್ಲದ ಅಭಿಮಾನ, ಅವರ ಅನ್ನಭಾಗ್ಯ, ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಿಂದಾಗಿ ಅವರ ಅಭಿಮಾನಿಯಾಗಿರುವ ಅವರು ತಮಗೆ ಮಗನಿಗೆ ಸಿದ್ದರಾಮಯ್ಯ ಎಂಬ ಹೆಸರಿಡಬೇಕೆಂದು ನಿಶ್ಚಿಯಿಸಿಕೊಂಡಿದ್ದು, ಅದರಂತೆ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ.

ಸಿದ್ದರಾಮಯ್ಯ ಎಂಬ ಹೆಸರನ್ನು ನಾಮಕರಣ ಮಾಡಿದ ಮಂಜುನಾಥ ದಂಪತಿ ಬಂದು ಭಾಂದವರಿಗೆ ಭರ್ಜರಿ ಊಟ ಹಾಕಿಸಿದ್ದಾರೆ. ಸಾಮಾನ್ಯವಾಗಿ ಬಹುತೇಕರು ತಮ್ಮ ಮಕ್ಕಳಿಗೆ ದೇವರು ಹೆಸರಿಡುತ್ತಾರೆ. ಇನ್ನೂ ಕೆಲವರು ಮಾತಿಗೆ ಇಂಥವರ ಹೆಸರು ನಮ್ಮ ಮಕ್ಕಳಿಗೆ ಹೆಸರಿಡಬೇಕು ಎನ್ನುತ್ತಾರೆ ಅದೇ ರೀತಿ ಮಂಜುನಾಥ ತಮ್ಮ ಮೊದಲು ಮಗನಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

- Advertisement -
spot_img

Latest News

error: Content is protected !!