Saturday, May 4, 2024
Homeತಾಜಾ ಸುದ್ದಿಕೇರಳದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ; ಕೌಟುಂಬಿಕ ಘರ್ಷಣೆಯಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುವಾಗ ವೈದ್ಯೆಯನ್ನು ಇರಿದು...

ಕೇರಳದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ; ಕೌಟುಂಬಿಕ ಘರ್ಷಣೆಯಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುವಾಗ ವೈದ್ಯೆಯನ್ನು ಇರಿದು ಕೊಂದ ಪಾಪಿ

spot_img
- Advertisement -
- Advertisement -

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಕೌಟುಂಬಿಕ ಘರ್ಷಣೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನ ಪೊಲೀಸರು ಆಸ್ಪತ್ಪೆಗೆ ಕರೆದೊಯ್ದು ಚಿಕಿತ್ಸೆ ನೀಡುವಾಗ ಆತ ವೈದ್ಯೆಯನ್ನೇ ಇರಿದು ಕೊಲೆ ಮಾಡಿದ್ದಾನೆ.

ಬುಧವಾರ ಬೆಳಗ್ಗೆ ಕುಟುಂಬಸ್ಥರು ತನ್ನನ್ನ ಥಳಿಸಿ ಸಾಯಿಸುತ್ತಿದ್ದಾರೆ, ರಕ್ಷಿಸಿ ಎಂದು ಸಂದೀಪ್ ಎಂಬ ವ್ಯಕ್ತಿ ಕೊಟ್ಟಾರಕ್ಕರ ಪೊಲೀಸರಿಗೆ ಕರೆ ಮಾಡಿದ್ದ. ಅದ್ರಂತೆ, ಪೊಲೀಸರು ಆತನ ಮನೆಗೆ ಹೋಗಿದ್ದು, ಗಲಾಟೆಯಲ್ಲಿ ಗಾಯಗೊಂಡಿದ್ದ ಸಂದೀಪ್’ನನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ 23 ವರ್ಷದ ವೈದ್ಯೆ ವಂದನಾ ದಾಸ್ ಆತನ ಕಾಲಿನ ಗಾಯಕ್ಕೆ ಬ್ಯಾಂಡೇಜ್ ಹಾಕುವಾಗ, ಏಕಾಏಕಿ ರೊಚ್ಚಿಗೆದ್ದ ಸಂದೀಪ್  ಆಕೆಯ ಮೇಲೆ ಕತ್ತರಿ ಹಾಗೂ ಸರ್ಜಿಕಲ್ ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾನೆ. ಆ ವೈದ್ಯೆ ಕಾಪಾಡಿ ಎಂದು ಕಿರುಚುತ್ತಾ ಕೊಠಡಿಯಿಂದ ಹೊರಗೆ ಓಡಿ ಹೋದ್ರೂ, ಬೆನ್ನಟ್ಟಿದ ಸಂದೀಪ್, ವೈದ್ಯೆಯನ್ನು ಕತ್ತರಿ ಚುಚ್ಚಿ ಕೊಂದಿದ್ದಾನೆ.

ವೈದ್ಯರ ಕೊಠಡಿಯ ಹೊರಗಿದ್ದ ಪೊಲೀಸರು ವ್ಯಕ್ತಿಯನ್ನ ತಡೆಯಲು ಯತ್ನಿಸಿದರೂ ತಡೆಯಲು ಸಾಧ್ಯವಾಗಲಿಲ್ಲ. ಈ ವೇಳೆ ಕೆಲ ಪೊಲೀಸರಿಗೂ ಗಾಯಗಳಾಗಿದ್ದು, ಕಷ್ಟಪಟ್ಟು ಆತನನ್ನು ಬಂಧಿಸಿದ್ದಾರೆ. ಸಧ್ಯ ಶಾಲಾ ಶಿಕ್ಷಕ ಸಂದೀಪ್ ಅಮಾನತುಗೊಂಡಿದ್ದಾನೆಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯರ ಮೇಲೆ ಹಲ್ಲೆ ನಡೆಸಿದಾಗ ಆತ ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ. ಆದ್ರೆ, ಸಂದೀಪ್ ಸಿಟ್ಟಿಗೆದ್ದು ಡಾ.ವಂದನಾ ಮೇಲೆ ಏಕೆ ಹಲ್ಲೆ ನಡೆಸಿದ್ದಾನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಡಾ.ವಂದನಾ ಅವರನ್ನ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ಕೇರಳದಲ್ಲಿ ಸಂಚಲನ ಮೂಡಿಸಿದೆ. ಭಾರತೀಯ ವೈದ್ಯಕೀಯ ಸಂಘ ರಾಜ್ಯ ಸರ್ಕಾರಿ ವೈದ್ಯರ ಸಂಘವು ದಾಳಿಯನ್ನ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದೆ. ಇನ್ನು ಈ ಘಟನೆ ಬಗ್ಗೆ ಕೇರಳ ಸಿಎಂ ವಿಜಯನ್ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!