- Advertisement -
- Advertisement -
ಸುಬ್ರಮಣ್ಯ; ಮಗು ಮಲಗಿದೆ ಮೆಲ್ಲ ಮಾತಾಡಿ ಅಂದಿದ್ದಕ್ಕೆ ಮಗುವಿನ ತಂದೆಗೆ ಸಂಬಂಧಿಯೊಬ್ಬ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಗ್ರಾಮದಲ್ಲಿ ನಡೆದಿದೆ.
ಬಳ್ಪದ ರಮೇಶ್ ಎಂಬವರು ತನ್ನ ಪತಿ ಹಾಗೂ ಮಗುವಿನೊಂದಿಗೆ ಮನೆಯೊಂದರಲ್ಲಿ ವಾಸವಿದ್ದು ಮಾ. 26 ರಂದು ಸಂಜೆ ಸಂಬಂಧಿ ಸುಂದರ ಹೊಸಮಠ ಎಂಬವರು ಮನೆಗೆ ಬಂದಿದ್ದರು. ಸುಂದರ್ ಜೋರಾಗಿ ಮಾತನಾಡುತ್ತಿದ್ದಾಗ ರಮೇಶ್ ಅವರು ಸಣ್ಣ ಮಗು ಮಲಗಿದೆ, ಜೋರಾಗಿ ಮಾತನಾಡಬೇಡಿ ಎಂದಿದ್ದಾರೆ. ಇಷ್ಟಕ್ಕೆ ಗರಂ ಆದ ಸುಂದರ್ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದಾದ ಗಾಯಕ್ಕೆ ಮಾ.27ರಂದು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದು ಬಂದಿದೆ. ರಮೇಶ್ ಅವರು ನೀಡಿದ್ದ ದೂರಿನ ಮೇರೆಗೆ ಸುಂದರ ಹೊಸಮಠ ಎಂಬವರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ :22 /2024ಕಲಂ: 324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
- Advertisement -