- Advertisement -
- Advertisement -
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಗಾಳ ಮೂಲದ ಸುಭಾಷ್ ಗುಪ್ತ ಬಂಧಿತ ಆರೋಪಿ.
ಇನ್ನು ವಿಚಾರಣೆ ವೇಳೆ ಯಾಕೆ ಹೀಗೆ ಮಾಡಿದೆ ಅಂತಾ ಕಾರಣ ಕೇಳಿದ ಪೊಲೀಸರು ಆತನ ಉತ್ತರ ಕೇಳಿ ಸುಸ್ತಾಗಿದ್ದಾರೆ. ಈತ ತನ್ನ ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆಳಗಿನ ಜಾವ 3.30ಕ್ಕೆ ಬಾವನ ಹೆಸರು ಹೇಳಿ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಅಕ್ಕನ ಗಂಡನ ಹೆಸರು ಹೇಳಿದರೆ ಅವನನ್ನು ಬಂಧಿಸುತ್ತಾರೆ ಎಂದುಕೊಂಡಿದ್ದ ಮೂರ್ಖ ಇದೀಗ ಸ್ವತಃ ಜೈಲು ಪಾಲಾಗಿದ್ದಾನೆ. ಆರೋಪಿಯನ್ನು ವಿಧಾನಸೌಧ ಪೊಲೀಸರ ವಶಕ್ಕೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
- Advertisement -