- Advertisement -
- Advertisement -
ಉತ್ತರಕನ್ನಡ: ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಅರಣ್ಯದಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹೆಗ್ಗೋಡ್ಮನೆ ನಿವಾಸಿ ನಿವಾಸಿ ಮಂಜುಳಾ (46) ಎಂಬ ಮಹಿಳೆಯನ್ನು ಈಕೆಯ ಪತಿ ಮಂಜುನಾಥ ಚನ್ನಯ್ಯ ಕೊಲೆಗೈದಿದ್ದ.
ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತೆರಳಿ ಕತ್ತಿಯಿಂದ ಹೆಂಡತಿಯನ್ನು ಕೊಂದಿದ್ದ. ಕೊಲೆ ಬಳಿಕ ಪಕ್ಕದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಸಿದ್ಧಾಪುರ ಠಾಣಾ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
- Advertisement -