- Advertisement -
- Advertisement -
ಬೆಂಗಳೂರು: ಎಂಥೆಂತಾ ಮನುಷ್ಯರಿರುತ್ತಾರೆ ಅಂತಾ ಹೇಳೋಕೆ ಸಾಧ್ಯಾನೇ ಇಲ್ಲ. ಇಲ್ಲೊಬ್ಬ ವಿಚಿತ್ರ ವ್ಯಕ್ತಿ ಊರು ತುಂಬಾ ಸ್ವಾರಿ ಸ್ವಾರಿ ಅಂತಾ ಸಿಕ್ಕ ಸಿಕ್ಕಲೆಲ್ಲಾ ಬರೆದು ಕ್ಷಮೆ ಕೇಳಿದ್ದಾನೆ.
ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ತಡರಾತ್ರಿಯಲ್ಲಿ ಈ ರೀತಿ ಹುಚ್ಚಾಟ ಮೆರೆಯಲಾಗಿದೆ. ಅದ್ಯಾವ ಪುಣ್ಯಾತ್ಮ ಈ ಕೆಲಸ ಮಾಡಿದ್ದಾನೋ ಗೊತ್ತಿಲ್ಲ. ಸ್ಕೂಲ್ ನ ಕಾಂಪೌಂಡ್, ಮೆಟ್ಟಿಲು, ರಸ್ತೆ ಹೀಗೆ ಎಲ್ಲಾ ಕಡೆ Sorry ಅಂತಾ ಬರೆಯಲಾಗಿದೆ.
ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಶಾಕ್ ಆಗಿದೆ. ಯಾರು ಮತ್ತು ಯಾಕೆ ಈ ರೀತಿ Sorry ಕೇಳಿರುವುದು ಎಂದು ಸ್ಥಳೀಯರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇತ್ತ ಪೊಲೀಸರು ಕೂಡ Sorry ಬರೆದ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚಲು ಫೀಲ್ಡ್ ಗಿಳಿದಿದ್ದಾರೆ.
- Advertisement -