ಉಡುಪಿ: ಹಿಂದೂ ಸಮುದಾಯಕ್ಕೆ ಸೇರಿದ 18ರ ಹರೆಯದ ಪದವಿ ಕಾಲೇಜು ವಿದ್ಯಾರ್ಥಿನಿ ಯೊಬ್ಬಳು ನಾಪತ್ತೆಯಾಗಿದ್ದು, ಆಕೆ ಅಜರ್ ಎಂಬ ಮುಸ್ಲಿಂ ಸಮುದಾಯದ ಬಸ್ ಚಾಲಕನ ಜೊತೆ ಹಾಸನದಲ್ಲಿ ಪತ್ತೆಯಾಗಿದ್ದಾಳೆ. ಇದೀಗ ಇದು ಲವ್ ಜಿಹಾದ್ ಕೃತ್ಯ ಎಂಬ ಆರೋಪ ವ್ಯಕ್ತವಾಗಿದೆ.
ಎರಡು ದಿನಗಳ ಹಿಂದೆ ಈ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಕುರಿತು ಪೋಷಕರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಸಿದ್ದರು.
ಈಕೆ ಪದವಿ ಶಿಕ್ಷಣಕ್ಕಾಗಿ ಪ್ರತಿನಿತ್ಯ ಉಡುಪಿ ಕಾಲೇಜಿಗೆ ಬರುತ್ತಿದ್ದು, ಅಲ್ಲಿ ಬಸ್ ಚಾಲಕ ಅಜರ್ ಎಂಬವನ ಪರಿಚಯವಾಗಿತ್ತು. ಅದು ಪ್ರೀತಿಯಾಗಿ ಬದಲಾಗಿತ್ತು ಎಂದು ತಿಳಿದುಬಂದಿದೆ. ಅಲ್ಲದೇ ವಾರದ ಹಿಂದೆ ರಿಜಿಸ್ಟ್ರಾರ್ ಮದುವೆ ಆಗಲು ಪ್ರಯತ್ನಿಸಿದ್ದರು. ಹಾಗಾಗಿ ಯುವತಿ ಆತನ ಜೊತೆ ಪರಾರಿ ಆಗಿರಬಹುದು ಅಥವಾ ಯುವಕ ಆಕೆಯನ್ನು ಅಪಹರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು .
ಆದರೆ ಆರೋಪಿ ಪ್ರಕರಣ ದಾಖಲಾಗುತ್ತಲೇ ಯುವತಿ ನನ್ನ ಜತೆ ಇಲ್ಲ ಎಂದು ಪೊಲೀಸರಿಗೆ ಸುಳ್ಳು ಹೇಳಿ ಯಾಮಾರಿಸಿದ್ದ .ಆದರೇ ಇದೀಗ ಹಾಸನದಲ್ಲಿ ಜೊತೆಯಾಗಿ ಪತ್ತೆಯಾಗಿ ಪೊಲೀಸರಿಗೆ ಅತಿಥಿಯಾಗಿದ್ದಾನೆ.
ಇದೊಂದು ವ್ಯವಸ್ಥಿತ ಲವ್ ಜಿಹಾದ್ ಪ್ರಕರಣ, ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಯುವಕ ಕರೆಸಿಕೊಂಡಿದ್ದಾನೆ. ಈ ದಿಕ್ಕಿನಲ್ಲಿ ಪೊಲೀಸರು ತನಿಖೆ ಮಾಡಬೇಕೆಂಬುದು ಹಿಂದೂ ಸಂಘಟನೆಗಳ ಆಗ್ರಹ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಮಹೇಶ್ ಬೈಲೂರು ತಿಳಿಸಿದ್ದಾರೆ.