- Advertisement -
- Advertisement -
ಕಾಸರಗೋಡು: ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಲಘು ಭೂಕಂಪನದ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಕಲ್ಲಪಳ್ಳಿ ಪರಿಸರದಲ್ಲಿ ಇಂದು ಬೆಳಿಗ್ಗೆ ಕಂಪನ ಅನುಭವವಾಗಿದೆ ಎನ್ನಲಾಗಿದೆ.
ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು,ಬೆಳಿಗ್ಗೆ 7.45 ರ ಸುಮಾರಿಗೆ ಈ ಘಟನೆ ನಡೆದಿದೆ. ಭೂಕಂಪನದ ತೀವ್ರತೆ 3.5ರಷ್ಟಿತ್ತು ಎಂದು ವರದಿಯಾಗಿದೆ.
ಜೂನ್ 25 ರಂದು ಉಂಟಾದ ಕಂಪನದ ಶಬ್ದಕ್ಕಿಂತ ಈ ಬಾರಿ ಹೆಚ್ಚಿನ ಶಬ್ದ ಕೇಳಿ ಬಂದಿದ್ದು , ಜನತೆಯಲ್ಲಿ ಭಯವನ್ನು ಉಂಟು ಮಾಡಿತ್ತು. ಶಬ್ದ ಹಾಗೂ ಕಂಪನದಿಂದ ಹಲವು ಮಂದಿ ಮನೆಯಿಂದ ಹೊರ ಓಡಿ ಬಂದಿದ್ದಾರೆ ಎನ್ನಲಾಗಿದೆ.
- Advertisement -