- Advertisement -
- Advertisement -
ಚಾರ್ಮಾಡಿ; ಕಳೆದ ಎರಡು ಮೂರು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರೋದರಿಂದ ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿತವಾಗಿದೆ.ಮಣ್ಣು ಕುಸಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆಗಳ ವಾಹನ ಸಂಚಾರ ಬಂದ್ ಆಗಿತ್ತು.
ಚಾರ್ಮಾಡಿ ಘಾಟಿ ಗುಡ್ಡದಲ್ಲಿ ಮತ್ತೆ ಮಣ್ಣು ಕುಸಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಆಲೆಕಾನ್-ಬಿದ್ರುತಳ ಮಧ್ಯದಲ್ಲಿ ರಸ್ತೆಗೆ ಮಣ್ಣು ಕುಸಿದಿದೆ. ಸದ್ಯ ಮಣ್ಣು ಕುಸಿಯುವ ಭೀತಿಯಿರೋದರಿಂದ ಆತಂಕದಲ್ಲೇ ವಾಹನ ಸವಾರರು ವಾಹನ ಚಲಾಯಿಸುತ್ತಿದ್ದಾರೆ.
- Advertisement -