- Advertisement -
- Advertisement -
ಮೈಸೂರು: ಪತಿಯ ಮೇಲೆ ಹಲ್ಲೆ ಮಾಡುತ್ತಿದ್ದವರನ್ನು ಮಹಿಳೆಯೊಬ್ಬಳು ಹೊಡೆದು ಓಡಿಸಿದ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದಿದೆ.
ರಮೇಶ್ ಮತ್ತು ಶೋಭಾ ದಂಪತಿ ನರಸೀಪುರದಲ್ಲಿ ಟೀ ಜೊತೆಗೆ ಇತರ ಚಿಕ್ಕಪುಟ್ಟ ವಸ್ತುಗಳನ್ನು ಮಾರುವ ಅಂಗಡಿ ನಡೆಸುತ್ತಿದ್ದರು. ಈ ಅಂಗಡಿ ಲೈಟರ್ ತೆಗೆದುಕೊಳ್ಳಲು ಬಂದ ಯುವಕ ತಂಡ ಲೈಟರ್ಗೆ 20 ರೂಪಾಯಿ ಕೊಡದೆ ರಮೇಶ್ ಜೊತೆ ಜಗಳಕ್ಕಿಳಿದು ಹಲ್ಲೆ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿದ್ದಾರೆ.ರಮೇಶ್ ಅವರನ್ನು ಅಂಗಡಿಯಿಂದ ಎಳೆದುಕೊಂಡು ಹೋಗಿ ವಿವಸ್ತ್ರಗೊಳಿಸಿದ್ದಾರೆ.
ಈ ವೇಳೆ ಪತಿಯ ರಕ್ಷಣೆಗೆ ಮುಂದಾದ ಪತ್ನಿ ಶೋಭಾ ಏಕಾಂಗಿಯಾಗಿ ಹೋರಾಡಿ ಯುವಕರನ್ನು ಹೊಡೆದು ಓಡಿಸಿದ್ದಾರೆ. ಘಟನೆಯಲ್ಲಿ ಶೋಭಾ ಹಾಗೂ ರಮೇಶ್ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.ಘಟನೆ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -