- Advertisement -
- Advertisement -
ಬೆಂಗಳೂರು: ಆರ್ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿ ಎದುರು ಕಾಂಗ್ರೆಸ್ ಸೋಲನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಕುಸುಮಾ ಪ್ರತಿಕ್ರಿಯೆ ನೀಡಿದ್ದಾರೆ.
ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ, ಚುನಾವಣಾ ಕಣಕ್ಕೆ ಇಳಿಯಲು ಅವಕಾಶ ನೀಡಿದ ರಾಷ್ಟ್ರೀಯ ನಾಯಕರಿಗೆ ಧನ್ಯವಾದಗಳು ಎಂದು ಕುಸುಮಾ ಹೇಳಿದ್ದಾರೆ.
ಮನೆ ಮನೆಗೆ ಹೋದಾಗ ಮತದಾರರು ಅರಿಶಿನ ಕುಂಕು ಇಟ್ಟು ಆಶೀರ್ವದಿಸಿದ್ದಾರೆ. ಇವರಿಗೆಲ್ಲಾ ಧನ್ಯವಾಗಳು.ಪ್ರಚಾರದಲ್ಲಿ ಭಾಗಿಯಾದ ಮುಖಂಡರಿಗೆ, ಕಾರ್ಯಕರ್ತರಿಗೆ, ಬೆಂಬಲರಿಗೆ ಧನ್ಯವಾದಗಳು ಎಂದು ಕುಸುಮಾ ಹೇಳಿದ್ದಾರೆ.
ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ 1,25,734 ಮತಗಳನ್ನು ಗಳಿಸಿದ್ದರೇ, ಕಾಂಗ್ರೆಸ್ ನ ಹೆಚ್ ಕುಸುಮಾ 67,798 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ಕೃಷ್ಣ ಮೂರ್ತಿ 10,251 ಮತ ಗಳಿಸಿದ್ದಾರೆ.
- Advertisement -