ಉಡುಪಿ: ಎರಡು ದಿನಗಳ ಹಿಂದೆ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಉಡುಪಿಯ ಆಸ್ಪತ್ರೆಗೆ ಬಿಟ್ಟು ಯುವಕ ನಾಪತ್ತೆ ಹಾಗೂ ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ ಮೃತಪಟ್ಟ ಪ್ರಕರಣಕ್ಕೆ ಹೊಸ ಆಯಾಮ ಪಡೆದುಕೊಂಡಿದೆ.
ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಪ್ರವೀಣ್ ಕುಂದರ್ ನನ್ನು ಬಂಧಿಸಲಾಗಿದೆ. ಪ್ರವೀಣ್ ಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಡೈವರ್ಸ್ ನೀಡಿ ರಕ್ಷಿತಾಳನ್ನು ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ಮನನೊಂದು, ವಿಪರೀತ ಮದ್ಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕೆಲಸ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಉಡುಪಿ ನಗರದ ಅಂಬಾಗಿಲಿನಲ್ಲಿ 19 ವಯಸ್ಸಿನ ರಕ್ಷಿತಾ ನಾಯಕ್ ವಾಸ್ತವ್ಯವಿದ್ದು,
ಹದಿನೈದು ದಿನಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದಳು. ರಕ್ಷಿತಾ ಆತ್ಮಹತ್ಯೆಗೂ ಮುನ್ನ ಪ್ರಿಯಕರನಿಗೆ ಕರೆಮಾಡಿ “ನನ್ನ ಜತೆ ಸಂಸಾರ ಮಾಡಬೇಕು. ಇಲ್ಲವಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದುವೇ ನನ್ನ ಕೊನೆಯ ಕರೆಯಾಗಬಹುದು’ ಎಂದು ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದಳು. ಇದರಿಂದ ಹೆದರಿದ ಪ್ರಿಯಕರ ತತ್ಕ್ಷಣ ಆಕೆಯ ಮನೆಯತ್ತ ತೆರಳಿದ್ದಾನೆ. ಆದರೆ ಆ ವೇಳೆಗಾಗಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಇಂಟಿರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದ ಪ್ರಶಾಂತ್ಗೆ ಇನ್ಸ್ಟಾಗ್ರಾಂ ಮೂಲಕ ರಕ್ಷಿತಾಳ ಪರಿಚಯವಾಗಿತ್ತು. ಆನ್ಲೈನ್ನಲ್ಲಿ ಇವರು ಇಂಟಿರಿಯರ್ ಡಿಸೈನ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಇನ್ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದ ಈಕೆಗೆ 40 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್ಗಳಿದ್ದರು.
ಇನ್ನು ಮೃತ ರಕ್ಷಿತಾಳ ಕತ್ತಿನಲ್ಲಿ ಗಾಯದ ಗುರುತುಗಳಿವೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯಂತೆ ಕಂಡು ಬಂದರೂ ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿಯಬೇಕಿದೆ. ಇಷ್ಟಕ್ಕೂ ಆಕೆಯ ಪ್ರಿಯಕರ ಪ್ರಶಾಂತ ಬೈಂದೂರು ಸಮೀಪದ ಜಡ್ಕಲ್ ಮೂಲದವನಾಗಿದ್ದು, ತನ್ನ ಊರಲ್ಲೂ ಅಪ್ರಾಪ್ತ ಹುಡುಗಿಯ ಜೊತೆ ಚೆಲ್ಲಾಟವಾಡಿ ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿ ಜೈಲುವಾಸ ಅನುಭವಿಸಿ ಬಂದಿದ್ದ. ಹಾಗೂ ಸದ್ಯ ಈತ ಮದುವೆಯಾಗಿರುವ ಯುವತಿಯನ್ನು ಸಹ ಪ್ರೀತಿಸಿಯೇ ಮದುವೆಯಾಗಿದ್ದ. ಸ್ತ್ರೀಲೋಲ ಪ್ರಶಾಂತ್ ನಿಂದ ಮೋಸ ಹೋಗಿರುವ ಅಮಾಯಕ ಹೆಣ್ಣು ಮಕ್ಕಳ ನಿಜ ಚಿತ್ರಣ ಸಿಗುವುದು ಪೋಲೀಸರ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ..