- Advertisement -
- Advertisement -
ಬೆಂಗಳೂರು: ಮಂಗಳೂರಿಲ್ಲಿ ಸರಣಿ ಕೊಲೆಗಳಾಗಿರುವ ಹಿನ್ನೆಲೆ ಮತ್ತೊಂದು ಕೆಎಸ್ ಆರ್ ಪಿ ಬೆಟಾಲಿಯನ್ ಮಂಗಳೂರಿಗೆ ಕಳುಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಸುರತ್ಕಲ್ ನ ಫಾಜಿಲ್ ಹತ್ಯೆ ಆರೋಪಿಗಳ ಪತ್ತೆಗೂ ಕೂಡ ತಂಡಗಳ ರಚನೆ ಮಾಡಲಾಗುತ್ತದೆ ಮತ್ತು ಧಾರ್ಮಿಕ ಮುಖಂಡರ ಸಭೆಯನ್ನೂ ಕೂಡ ಕರೆದು ಮಾತನಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಸ್ವಲ್ಪ ಸಮಯ ಸಿಕ್ಕ ತಕ್ಷಣ ಖಂಡಿತವಾಗಿಯೂ ಧಾರ್ಮಿಕ ಮುಖಂಡರ ಸಭೆಯನ್ನು ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಇಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
- Advertisement -