Wednesday, June 3, 2026
Homeಕರಾವಳಿಉಡುಪಿಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ರಾಜ್ಯ ಸಮಿತಿ ರಚನೆ: ದ.ಕ. ಮತ್ತು‌ ಉಡುಪಿ‌ ಜಿಲ್ಲೆಯ 10...

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ರಾಜ್ಯ ಸಮಿತಿ ರಚನೆ: ದ.ಕ. ಮತ್ತು‌ ಉಡುಪಿ‌ ಜಿಲ್ಲೆಯ 10 ನಾಯಕರಿಗೆ ಸ್ಥಾನ

- Advertisement -
- Advertisement -

ಬೆಂಗಳೂರು: ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ರಾಜ್ಯ ಸಮಿತಿ, ಮುಖ್ಯ ವಕ್ತಾರರು ಮತ್ತು ವಕ್ತಾರರ ನೇಮಕ ಮಾಡಲಾಗಿದೆ. 20 ಸದಸ್ಯರ ಸಂವಹನ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲೆಯ ಅಮೃತ್ ಶೆಣೈ ನೇಮಕಗೊಂಡಿದ್ದಾರೆ.

27 ಮುಖ್ಯ ವಕ್ತಾರರ ಪಟ್ಟಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಪ್ರೊ.ಕೆ.ಇ. ರಾಧಾಕೃಷ್ಣ ಸ್ಥಾನ ಪಡೆದಿದ್ದಾರೆ. ವಕ್ತಾರರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಭರತ್ ಮುಂಡೋಡಿ, ವಿನಯ್ ರಾಜ್, ಶೌವಾದ್ ಗೂನಡ್ಕ, ವಿಠಲ್ ಶೆಟ್ಟಿ ಕೆ., ಪದ್ಮ ಪ್ರಸಾದ್ ಜೈನ್, ಅಮ್ಲಾ‌ ರಾಮಚಂದ್ರ ಮತ್ತು ಉಡುಪಿ ಜಿಲ್ಲೆಯ ಕಾರ್ನೆಲಿಯೋ ವೆರೋನಿಕಾ ನೇಮಕಗೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ಅನುಮೋದನೆ ಮೇರೆಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ರಾಜ್ಯ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ನೇಮಕಾತಿ ಆದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!