Sunday, May 5, 2024
Homeತಾಜಾ ಸುದ್ದಿಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ; ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಗಂಧದಗುಡಿ ಹೆಸರು ಪ್ರಕಟ

ಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ; ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಗಂಧದಗುಡಿ ಹೆಸರು ಪ್ರಕಟ

spot_img
- Advertisement -
- Advertisement -

ಬೆಂಗಳೂರು : ಕರ್ನಾಟಕ ರತ್ನ, ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ ಅಪ್ಪು ನಮ್ಮೆಲ್ಲರನ್ನು ಅಗಲಿ ಇಂದಿಗೆ 1 ವರ್ಷ. ಇದರ ನಡುವೆ ಅಪ್ಪು ಅಭಿನಯದ ಗಂಧದ ಗುಡಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಗಂಧದಗುಡಿ ಹೆಸರು ಪ್ರಕಟಿಸುವ ಮೂಲಕ ಅಪ್ಪುಗೆ ಕೆಎಂಎಫ್ ವಿಶೇಷ ಗೌರವ ಸಲ್ಲಿಸಿದೆ.

ಈ ಮೂಲಕ ಗಂಧದಗುಡಿ ಸಿನಿಮಾಗೆ ಕೆಎಂಎಫ್ ಸಹ ತನ್ನ ಬೆಂಬಲ ನೀಡಿದೆ. ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್​ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ. ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಿದೆ ಕೆಎಂಎಫ್ ವಿಭಿನ್ನವಾಗಿ ಗೌರವ ತೋರಿದೆ. ಮುಂದಿನ 15 ದಿನಗಳ ಕಾಲ ಹಾಲಿನ ಪ್ಯಾಕೆಟ್ ಮೇಲೆ ಗಂಧದಗುಡಿ ಹೆಸರು ಇರಲಿದೆ. ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ರೀತಿ ಗೌರವಿಸಲು ಕೆಎಂಎಫ್ ನಿರ್ಧರಿಸಿದೆ. ಪುನೀತ್ ರಾಜ್​ಕುಮಾರ್ ಈ ಹಿಂದೆ KMFನ ಬ್ರಾಂಡ್ ಅಂಬಾಸಿಡರ್ ಆಗಿದ್ರು. ಹೀಗೆ ತನ್ನ ಅಂಬಾಸಿಡರ್ ಆಗಿದ್ದ ಅಪ್ಪು ರೈತರ ಸಹಾಯಕ್ಕೂ ಕೈ ಜೋಡಿಸಿದ್ದರು. ಹೀಗಾಗಿ ಕೆಎಂಎಫ್ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸುತ್ತಿದೆ.

ನಂದಿನಿ ಹಾಲಿನ ಪ್ಯಾಕೆಟ್ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಲಾಗಿದೆ. 15 ದಿನಗಳ ಕಾಲ ಹಾಲಿನ ಪ್ಯಾಕೇಟ್ ಮೇಲೆ ಹೆಸರು ಮುದ್ರಿಸಲಾಗುತ್ತದೆ. ಈ ಬಗ್ಗೆ ಮಾಧ್ಯಮಗಳಿಗೆ KMF MD ಸತೀಶ್ ಮಾಹಿತಿ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿ ಈ ರೀತಿ ಗೌರವ ಸಲ್ಲಿಸಲಾಗಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!