- Advertisement -
- Advertisement -
ಮಂಗಳೂರು : ಕೊರೊನಾ ಎರಡನೇ ಅಲೆಯ ಆರ್ಭಟ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ಜಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ಕೋವಿಡ್ ನಿಯಮಾನುಸಾರ ಜಿಲ್ಲಾಡಳಿತ ಜಾತ್ರೆ ನಡೆಸೋದಕ್ಕೆ ಮುಂದಾಗಿತ್ತು.ಅದರಂತೆ ಜಾತ್ರೆ ಆರಂಭಗೊಂಡಿತ್ತು. ನಿರ್ಬಂಧಗಳಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿದ್ದರಿಂದ ಜಿಲ್ಲಾಡಳಿತಕ್ಕೆ ಅವರನ್ನು ನಿಭಾಯಿಸೋದೇ ಬಹುದೊಡ್ಡ ಸವಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಧಕ್ಕೆ ಜಾತ್ರೆಯನ್ನು ಮೊಟಕುಗೊಳಿಸಿದ್ದಾರೆ.
ನಿನ್ನೆ ಹಗಲು ರಥೋತ್ಸವವನ್ನು ಬೇಗನೆ ಮುಗಿಸಲಾಗಿತ್ತು. ಅಲ್ಲದೇ ಇಂದು ನಡೆಯಬೇಕಾಗಿದ್ದ ಕಟೀಲು ಅಮ್ಮನವರ ಎಕ್ಕಾರು ಭೇಟಿ ಹಾಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಭೇಟಿಯನ್ನು ರದ್ದು ಮಾಡಲಾಗಿದೆ.ಉಳಿದ ಕಾರ್ಯಕ್ರಮಗಳೂ ಕೂಡ ಸರಳವಾಗಿ ನಡೆಯಲಿವೆ ಎನ್ನಲಾಗುತ್ತಿದೆ.
- Advertisement -