- Advertisement -
- Advertisement -
ಬೆಳ್ತಂಗಡಿ; ಯುವಕೇಸರಿ ಕಣಿಯೂರು ಇದರ ಆಶ್ರಯದಲ್ಲಿ ಮ್ಯಾಟ್ ಅಂಕಣದ ಪ್ರೋ ಕಬಡ್ಡಿ ಮಾದರಿಯ ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಟ್ರೋಫಿ ಕಬಡ್ಡಿ ಪಂದ್ಯಾಟ ನಾಳೆ ಅಂದರೆ ಫೆಬ್ರವರಿ 4 ರಂದು ನಡೆಯಲಿದೆ.
ಕಣಿಯೂರು ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾಟ ಸಂಜೆ 5 ಗಂಟೆ ಉದ್ಘಾಟನೆಗೊಳ್ಳಲಿದೆ. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಇನ್ನು ಪ್ರಥಮ ಬಹುಮಾನ 50 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 30 ಸಾವಿರ ಹಾಗೂ ತೃತೀಯ ಬಹುಮಾನ 20 ಸಾವಿರ ರೂಪಾಯಿಯನ್ನು ಬಹುಮಾನ ವಿಜೇತ ತಂಡಗಳು ಪಡೆಯಲಿವೆ.
- Advertisement -