Sunday, May 5, 2024
Homeಜ್ಯೋತಿಷ್ಯಗುರುವಾರದ ದಿನ ಭವಿಷ್ಯ: ಈ ದಿನ ನಿಮಗೆ ಹೇಗಿರುತ್ತದೆ ? (18-06-2020)

ಗುರುವಾರದ ದಿನ ಭವಿಷ್ಯ: ಈ ದಿನ ನಿಮಗೆ ಹೇಗಿರುತ್ತದೆ ? (18-06-2020)

spot_img
- Advertisement -
- Advertisement -

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪರಿಹಾರ ಶಾಸ್ತ್ರ
ನಂಬಿ ನಂಬದಿರಿ ಇದು ಸತ್ಯ. ನಿಮ್ಮ ನಂಬಿಕೆಗಳಿಗೆ ಇಲ್ಲಿ ಮೋಸವಿಲ್ಲ
ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರಬದ್ಧವಾಗಿ ಶೀಘ್ರದಲ್ಲೇ ಪರಿಹಾರ ಮಾಡಿಕೊಡುತ್ತಾರೆ
ಗುರೂಜಿ ಹನುಮಂತರಾವ್
9686487402

ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬೆಳಗ್ಗೆ 9:41 ನಂತರ ತ್ರಯೋದಶಿ ತಿಥಿ,
ಗುರುವಾರ, ಭರಣಿ ನಕ್ಷತ್ರ
ಬೆಳಗ್ಗೆ 8:30 ನಂತರ ಕೃತ್ತಿಕಾ ನಕ್ಷತ್ರ

ದಿನ ವಿಶೇಷ: ಪ್ರದೋಷ
ರಾಹುಕಾಲ: ಮಧ್ಯಾಹ್ನ 2:01 ರಿಂದ 3:37
ಗುಳಿಕಕಾಲ: ಬೆಳಗ್ಗೆ 9:12 ರಿಂದ 10:48
ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:36

ಮೇಷ
ಸಮೃದ್ಧಿಯ ಜೀವನ. ಆರೋಗ್ಯದಲ್ಲಿ ಸುಧಾರಣೆ. ಹೊಸ ವಾಹನ ,ಹೊಸ ಮನೆ ಕಟ್ಟಡ ಯಶಸ್ಸು. ಪ್ರೇಮಿಗಳಿಗೆ ಸಂತಸದ ಸುದ್ದಿ. ನಿರುದ್ಯೋಗಿಗಳಿಗೆ ಉದ್ಯೋಗದ ಭಾಗ್ಯ. ಪಿತ್ರಾರ್ಜಿತ ಆಸ್ತಿಯ ಗೊಂದಲ ನಿವಾರಣೆಯಾಗಲಿದೆ. ಸಾಲ ತೀರಿಸುವದರಲ್ಲಿ ಪ್ರಗತಿ ಕಾಣುವಿರಿ. ಹೊಸ ಉದ್ಯಮ ಪ್ರಾರಂಭ ಯಶಸ್ಸು. ನಿಂತುಹೋದ ಮದುವೆ ಕಾರ್ಯಗಳು ಮರು ಭಾಗ್ಯ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ. ಶತ್ರುಗಳು ತಣ್ಣಗಾಗುವರು.

ವೃಷಭ
ಇಂದು ನಿಮ್ಮ ಕೆಲಸದಲ್ಲಿ ಮನಸ್ಸು ನಿರಾಳವಾಗಿರುವುದು. ಮನಸ್ಸಿನ ಜಂಜಾಟ,ಮನಸ್ತಾಪ ಮುಕ್ತಿ ದೊರೆಯುವುದು. ಆರೋಗ್ಯದ ಸಲುವಾಗಿ ಅತಿಯಾದ ಔಷಧ ಸೇವನೆ ಮಾರಕವಾಗುವುದು. ಕುಟುಂಬ ಸದಸ್ಯರ ಶಸ್ತ್ರಚಿಕಿತ್ಸೆ ಚಿಂತನೆ. ಆಸ್ತಿ ಮಾರಾಟದ ಚಿಂತನೆ. ಸಾಲಗಾರರಿಂದ ಕಿರಿಕಿರಿ. ಲೇವಾದೇವಿಗಾರರು ಸಾಲ ವಸೂಲಾತಿ ಮನಸ್ತಾಪ. ಸಂಗಾತಿಗೆ ಪ್ರಿಯಕರನಿಂದ ಪ್ರಾಯಶ್ಚಿತ್ತ.

ಮಿಥುನ:-
ಅತ್ಯಂತ ವಿವೇಕಶಾಲಿ ಮತ್ತು ಬುದ್ಧಿಶಾಲಿಯಾದ ನೀವು ಸಮಸ್ಯೆಯಲ್ಲಿ ಸಿಲುಕುವ ಸಂಭವ. ನಿಮ್ಮ ಪ್ರಾಮಾಣಿಕತನವು ಮುಳ್ಳ್ ಆಗುವುದು. ಕೌಟುಂಬಿಕ ಜೀವನದಲ್ಲಿ ಮನಸ್ತಾಪ ವೇ ಹೆಚ್ಚು. ಯಾರು ನಿಮ್ಮ ಪರ ನಿಲ್ಲಲಾರರು. ನಿಮ್ಮ ಮಾತಿಗೆ ವಿರೋಧವೆ ಹೆಚ್ಚು. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ವಿಚ್ಛೇದನ ಪಡೆದ ಹೆಣ್ಣು ಮಕ್ಕಳ ಮರು ಮದುವೆ ಭಾಗ್ಯ ಲಭಿಸಲಿದೆ. ದಂಪತಿಗಳಿಗೆ ಹಿರಿಯರಿಂದ ಸಂಸಾರದಲ್ಲಿ ಕಿರಿಕಿರಿ. ಪ್ರೇಮಿಗಳಿಗೆ ಮದುವೆ ಪ್ರಸ್ತಾಪ ಮೂಡಲಿದೆ.

ಕಟಕ
ಶುಭ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆ. ಮನೆ ಕಟ್ಟುವ ನಿರ್ಧಾರ ಹಣಕಾಸಿನ ಅಡಚಣೆಯಿಂದ ನಿಲ್ಲುವುದು. ಪತ್ನಿಯ ಮಾರ್ಗದರ್ಶನ ಪಡೆದು ಮುಂದುವರೆಯಿರಿ. ಮಗಳ ಸಂತಾನಕ್ಕಾಗಿ ವೈದ್ಯರಿಗೆ ಭೇಟಿ. ಮಾತಾಪಿತೃ ಆರೋಗ್ಯದ ಸಮಸ್ಯೆ ಕಾಡಲಿದೆ. ಅತ್ತೆ-ಸೊಸೆ ಮಧ್ಯೆ ಭಿನ್ನಾಭಿಪ್ರಾಯ. ಸಮಾಧಾನವೇ ಬ್ರಹ್ಮಾಸ್ತ್ರ. ಹೊಸ ವಾಹನ ಖರೀದಿ ನಿರಾಶೆ.ಮಕ್ಕಳಿಗಾಗಿ ಆಭರಣ ಖರೀದಿ. ಆಸ್ತಿ ವಿಚಾರಕ್ಕಾಗಿ ಅಥವಾ ಜಮೀನು ವಿಚಾರಕ್ಕಾಗಿ ಕಾದಾಟ. ಪ್ರೇಮಿಗಳ ಪ್ರಣಯದಾಟ ಮುಂದುವರೆಯಲಿದೆ.

ಸಿಂಹ
ಅಚ್ಚುಕಟ್ಟಾಗಿ ಮಾಡಿದ ಕೆಲಸ ನೀವು ಇತರರು ಹೇಳುವ ಮಾತಿನಿಂದ ಕ್ರೋಧಕ್ಕೆ ಒಳಗಾಗುವಿರಿ. ನಿಮ್ಮ ಪ್ರಾಮಾಣಿಕತೆ ಕೆಲಸ ಅಹಂ ಆಗಿ ತೋರುವುದು. ಆದ್ದರಿಂದ ಸಹೋದ್ಯೋಗಿಗಳೊಡನೆ ಸೌಜನ್ಯದಿಂದ ವರ್ತಿಸಿರಿ. ಮೇಲಾಧಿಕಾರಿoದ ಪ್ರಶಂಸೆ. ಉದ್ಯೋಗದಲ್ಲಿ ಬಡ್ತಿ. ಶಿಕ್ಷಕರಿಗೆ ವರ್ಗಾಂತರ ಭಾಗ್ಯ. ಶಿಕ್ಷಕರು ಹೊಸ ಮನೆ ಕಟ್ಟುವ ಭಾಗ್ಯ ಲಭಿಸಲಿದೆ. ಕುಟುಂಬದ ಜೊತೆ ಸಂತೋಷವಾಗಿ ಬಾಳುವಿರಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತನೆ. ಮಕ್ಕಳ ವಿವಾಹ ಕಾರ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಿ.

ಕನ್ಯಾ
‘ಅತಿ ವಿನಯಂ ದೂರ್ತಲಕ್ಷಣಂ ಎಂದರು ಹಿರಿಯರು. ಈ ದಿನ ಸಮಾಜದಲ್ಲಿ ನಿಮ್ಮ ಘನತೆ ಹೆಚ್ಚಾಗಲಿದೆ ಅದರ ಜೊತೆಗೆ ಹೆಚ್ಚಿನ ಜವಾಬ್ದಾರಿ ಸಿಗಲಿದೆ. ನಿಮ್ಮ ಹಿತೈಷಿಗಳ ಬಗ್ಗೆ ಜಾಗ್ರತೆ ಇರಲಿ. ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ಬೇಡ. ಸಾಲ ಮರು ಪಾವತಿ ವಿಳಂಬ. ಮಕ್ಕಳ ಆರೋಗ್ಯದ ಸಮಸ್ಯೆ ಕಾಡಲಿದೆ. ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ. ಕೆಲಸ ಬದಲಾಯಿಸುವುದು ಬೇಡ ಅಲ್ಲಿಯೇ ಮುಂದುವರೆಯಿರಿ.

ತುಲಾ
ಜೀವನದ ಏಳ್ಗೆಗಾಗಿ ಸಂಕಲ್ಪ ಮಾಡಿದ್ದೀರಿ ಆದರೆ ಪ್ರಗತಿಯಲ್ಲಿ ವಿಳಂಬ ಕಾಡಲಿದೆ. ನಿಮ್ಮ ಸಂಕಲ್ಪವು ಪತ್ನಿಯ ಸಹಾಯ ಪಡೆಯಿರಿ. ನಿಮಗೆ ಈ ಹಿಂದೆ ಸಹಾಯ ಮಾಡಿದವರಿಗೆ ನೆನಪುಗಳ ಆರಾಧನ ವಾಗುವುದು. ಹಳೆಯ ಸಂಗಾತಿ ಭೇಟಿ. ನಿಮ್ಮ ವಿರೋಧಿ ಆಕಸ್ಮಿಕ ಭೇಟಿ ಮಾತಿನ ಚಕಮಕಿ. ನಿಂತಿದ್ದ ಶುಭಕಾರ್ಯ ಮರುಚಾಲನೆ. ನವದಂಪತಿಗಳಿಗೆ ಸಂತಾನದ ಸಮಸ್ಯೆ. ದೇವದರ್ಶನ ಭಾಗ್ಯ.

ವೃಶ್ಚಿಕ:-
ಅನ್ಯರ ವಿಚಾರದಲ್ಲಿ ತಲೆ ಹಾಕಿ ರಂಪಾಟ ಮಾಡಿಕೊಳ್ಳುವಿರಿ. ಅನ್ಯರೂ ಅವಮಾನ ಮಾಡುವ ಸಾಧ್ಯತೆ. . ಗುರುವಿನ ಕೃಪೆಯಿಂದ ಮನೆಯಲ್ಲಿ ಮಂಗಳ ಕಾರ್ಯಗಳ ಪ್ರಸ್ತಾಪ ನಡೆಯುವುದು. ಸಮಾಜದಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸುವ ಅವಕಾಶ. ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಶುಭ ಸಮಾಚಾರ ಕೇಳುವಿರಿ. ಬಂಧು ಮಿತ್ರ ನಿಮಗೆ ಸಹಾಯ ಕೇಳಲು ಬರುವರು. ದೇವಸ್ಥಾನ ಕಟ್ಟಲು ಸಹಾಯ ಮಾಡುವಿರಿ. ಪ್ರೇಮಿಗಳಿಗೆ ಕಣ್ಣೀರಧಾರೆ.

ಧನಸ್ಸು:-
ಹಿತೈಷಿಗಳು ಮಾನಸಿಕ ವಿಕಾರವನ್ನುಂಟು ಮಾಡುವುದರಿಂದ ಕೆಲಸ ಕಾರ್ಯಗಳಲ್ಲಿ ದಾರಿ ತಪ್ಪುವ ಸಾಧ್ಯತೆ. ಆಲಸ್ಯ, ಜಡತ್ವವನ್ನು ತೊರೆದು ಕಾರ್ಯದಲ್ಲಿ ಪ್ರವೃತ್ತರಾಗುವುದರಿಂದ ಕೆಲಸದಲ್ಲಿ ಜಯವನ್ನು ಕಾಣುವಿರಿ. ಇಂದು ಹಣಗಳಿಸುವ ದಿನ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಸದ್ಯಕ್ಕೆ ಬೇಡ. ತಾವು ನೀಡಿರುವ ಶೂರಿಟಿ, ಜಾಮೀನು ತೊಂದರೆ ಕಾಡಲಿದೆ. ಕೆಲಸಕ್ಕಾಗಿ ಪರಸ್ಥಳಕ್ಕೆ ಹೊರಡುವ ಪ್ರಸಂಗ. ನೀವು ವಾಸಿಸಿರುವ ಮನೆಯನ್ನು ಹೊಸ ವಾಸ್ತು ಪ್ರಕಾರ ಮಾರ್ಪಾಟು. ಸರಕಾರಿ ನೌಕರಿ ಭಾಗ್ಯ. ನಿಮ್ಮ ಕಠಿಣ ಪ್ರಯತ್ನದಿಂದ ಸಫಲ. ಪ್ರೇಯಸಿ ಯೊಡನೆ ವಿರಸ.

ಮಕರ:-
ಗುರು ಕಾರುಣ್ಯದಿಂದ ಮಕ್ಕಳ ಶುಭ ಕಾರ್ಯಗಳು ಸುಗಮವಾಗಿ ಜರಗುವವು. ಆದರೆ ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವುದರಿಂದ ಕಷ್ಟದಿಂದ ಪಾರು. ಪಾಲುದಾರಿಕೆ ಯಾವುದೇ ವ್ಯವಹಾರ ಕಾರ್ಯ ಪ್ರಾರಂಭ ಬೇಡ. ಹಣಕಾಸಿನ ತೀವ್ರ ಸಂಕಟ. ಒಳ್ಳೆಯ ಅವಕಾಶ ಬಂದಿದ್ದು ಆದರೆ ಹಣದ ಕೊರತೆ ಕಾಡಲಿದೆ. ದಿನಿಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಸುವರ್ಣ ವ್ಯಾಪಾರಸ್ಥರು ಭರ್ಜರಿ ಲಾಭ ಪಡೆಯಲಿದ್ದಾರೆ. ಕೃಷಿಕರಿಗೆ ಉತ್ತಮ ಧನಲಾಭ. ಪ್ರೇಮ ವ್ಯಾಮೋಹ ಕಾಡಲಿದೆ.

ಕುಂಭ:-

ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಈದಿನ ವ್ಯಾಪಾರ ವೈವಾಟು ನಡೆಸುವಿರಿ. ದುರ್ಗೆಯು ದುಷ್ಟ ಜನರನ್ನು ದೂರ ಸರಿಸುತ್ತುತ್ತಾಳೆ. ಹಣಕಾಸಿನಲ್ಲಿ ಕೊಂಚ ಪ್ರಗತಿ. ಲೋಹ ಸಿಮೆಂಟ್ ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿಯಾಗಲಿದೆ. ಹೊಸ ಉದ್ಯಮ ಸದ್ಯಕ್ಕೆ ಪ್ರಾರಂಭ ಮಾಡುವಿರಿ. ಲೇವಾದೇವಿ ಪ್ರಗತಿ ಕಾಣುವಿರಿ. ಕುಟುಂಬದ ಜೊತೆ ಮಧುರ ಕ್ಷಣಗಳು ಅನುಭವಿಸುವಿರಿ. ಸಂಗಾತಿಯೊಡನೆ ವಿರಸ. ಸ್ನೇಹಿತರ ಮುಖಾಂತರ ಕೆಲಸ ಭಾಗ್ಯ. ಮಕ್ಕಳ ಮದುವೆ ವಿಳಂಬ. ಮಕ್ಕಳ ಮದುವೆ ಮಾತುಕತೆಗೆ ಹಂತಕ್ಕೆ ಬಂದು ನಿಲ್ಲುವುದು.

ಮೀನ:-
ದಾಯಾದಿಗಳಿಂದ ಹೊಸ ಸಮಸ್ಯೆಯು ಎದುರಾಗುವ ಸಾಧ್ಯತೆ. ಹಿರಿಯರ ಮಾತಿನಲ್ಲಿ ಸಮರ್ಥವಾಗಿ ಬಗೆಹರಿಸುವಿರಿ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ. ಹಣಕಾಸು ಉತ್ತಮವಾಗಿರುತ್ತದೆ. ಕುಕ್ಕುಟ ವ್ಯಾಪಾರಸ್ಥರಿಗೆ ಲಾಭ. ಹೈನುಗಾರಿಕೆ ಉದ್ಯಮ ಧನಲಾಭ. ಬಟ್ಟೆ ವ್ಯಾಪಾರಸ್ಥರಿಗೆ ಕೊಂಚ ನೆಮ್ಮದಿ. ಮಕ್ಕಳ ಸಂತಾನಕ್ಕಾಗಿ ವೈದ್ಯರ ಸಲಹೆ. ಉದ್ಯೋಗದಲ್ಲಿ ಮಧ್ಯಸ್ಥಿಕೆ ಜನರಿಂದ ಮನಸ್ತಾಪ. ಉದ್ಯೋಗ ಸೇವಾ ಅವಧಿಯಲ್ಲಿ ಕಳಂಕ. ಮೇಲಾಧಿಕಾರಿಗಳ ವಕ್ರದೃಷ್ಟಿ ಬೀಳಲಿದೆ. ನಿಮ್ಮ ಆರೋಗ್ಯದಲ್ಲಿ ರಕ್ತದ ಒತ್ತಡ ಹೆಚ್ಚಾಗಲಿದೆ. ಮಕ್ಕಳ ಆರೋಗ್ಯದ ಸಮಸ್ಯೆ ಕಾಡಲಿದೆ. ಮನೆ ಕಟ್ಟಡ ಸದ್ಯಕ್ಕೆ ಬೇಡ. ಸ್ತ್ರೀ-ಪುರುಷ ವ್ಯಾಮೋಹ ಕಾಡುವುದು.

- Advertisement -
spot_img

Latest News

error: Content is protected !!