- Advertisement -
- Advertisement -
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ಕುರಿತ ಹೈಕೋರ್ಟ್ ತೀರ್ಪು ನಾಳೆ ಹೊರ ಬೀಳಲಿದೆ. ನಾಳೆ ಬೆಳಗ್ಗೆ 10.30 ತೀರ್ಪು ಪ್ರಕಟಿಸಲು ಸಮಯ ನಿಗದಿಯಾಗಿದೆ.
ವಿವಾದ ಕುರಿತಂತೆ ಫೆಬ್ರವರಿ 25ರಿಂದ ನಿರಂತರ ಹನ್ನೊಂದು ದಿನಗಳ ವಿಚಾರಣೆ ಬಳಿಕ ನಾಳೆ ಹೈಕೋರ್ಟ್ ಪೂರ್ಣ ಪೀಠ ತೀರ್ಪು ಪ್ರಕಟಿಸುತ್ತಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೈಬುನ್ನೀಸಾ ಅವರನ್ನೊಳಗೊಂಡ ಪೂರ್ಣ ಪೀಠ ಹಿಜಾಬ್ ವಿವಾದ ಕುರಿತ ವಿಚಾರಣೆ ನಡೆಸಿತ್ತು.
- Advertisement -