- Advertisement -
- Advertisement -
ಮಲ್ಪೆ: ಜಿಲ್ಲೆಯ ಯಾವುದೇ ಭಾಗದ ಕಡಲು ಅಥವಾ ನದಿಯಲ್ಲಿ ದುರಂತ ಸಂಭವಿಸಿದರೂ ಕ್ಷಣ ಮಾತ್ರದಲ್ಲಿ ನೆರವಿಗೆ ಧಾವಿಸುವ ಆಪದ್ಭಾಂಧವ ಈಶ್ವರ್ ಮಲ್ಪೆ , ಇವತ್ತು ಸಾವಿನ ಜೊತೆ ಮುಖಾಮುಖಿಯಾಗಿ ಗೆದ್ದು ಬಂದಿದ್ದಾರೆ.
ಮಲ್ಪೆಯ ವಢಬಾಂಡೇಶ್ವರದಲ್ಲಿ ಇವರ ಬೈಕ್ ಮತ್ತು ಬಸ್ಸೊಂದು ಮುಖಾಮುಖಿ ಡಿಕ್ಕಿ ಹೊಡೆದರೂ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಈ ಅಪಘಾತದ ವೀಡಿಯೋ ವೈರಲ್ ಆಗಿದೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಈಶ್ವರ್ ಪಾರಾಗಿದ್ದು ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮಲ್ಪೆ ಭಾಗದ ಜನ ಈಶ್ವರ್ ಮಲ್ಪೆಯ ಆರೋಗ್ಯ ವಿಚಾರಿಸಲು ಮನೆಗೆ ಧಾವಿಸುತ್ತಿದ್ದು ಅವರು ಮಾಡಿದ ಪರೋಪಕಾರವೇ ಅವರ ಜೀವ ಉಳಿಸಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
- Advertisement -