- Advertisement -
![]()
- Advertisement -
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಬಿದ್ದಿರೋ ಗುಡ್ಡದ ಮಣ್ಣಿನ ತೆರವು ಕಾರ್ಯ ನಿರಂತರವಾಗಿ ಸಾಗುತ್ತಿದೆ.2 ಜೆಸಿಬಿಯಿಂದ ನಿರಂತರ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಇನ್ನು ಆಗಾಗ್ಗೆ ಸುರಿಯುತ್ತಿರೋ ಮಳೆ ಮಧ್ಯೆಯೇ ತೆರವು ಕಾರ್ಯ ನಡೆಯುತ್ತಿದೆ.
ಭಾರೀ ನೀರು ಹರಿದು ಬರುತ್ತಿರೋದರಿಂದ ರಸ್ತೆ ಬದಿ ಗುಂಡಿಗಳ ನಿರ್ಮಾಣವಾಗಿದೆ.ತಾತ್ಕಾಲಿಕವಾಗಿ ಮಣ್ಣನ್ನ ಹಾಕಿ ಅಧಿಕಾರಿಗಳು ಗುಂಡಿಗಳನ್ನ ಮುಚ್ಚುತ್ತಿದ್ದಾರೆ.ಅಲ್ಲದೇ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ.ಹೆದ್ದಾರಿ ಪ್ರಾಧಿಕಾರದಿಂದ ಮಣ್ಣಿನ ತೆರವು ಕಾರ್ಯ ನಡೆಯುತ್ತಿದೆ.
- Advertisement -


