- Advertisement -
- Advertisement -
ಬ್ರಹ್ಮಾವರ: ತಾಲೂಕಿನ ಹೇರೂರು ಕಾಡೋಳಿ ಕ್ರಾಸ್ ಸಮೀಪ ಕಾರ್ಯಾಚರಣೆ ನಡೆಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಏಳು ಗೋವುಗಳನ್ನು ವಶಪಡಿಸಿ ಗೋಸಾಗಾಟಗಾರರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಥಾಮಸ್ ಡಿ ಸೋಜ ಎನ್ನುವವನಿಗೆ ಅಕ್ರಮವಾಗಿ ಗೋವುಗಳನ್ನು ಸರಬರಾಜು ಮಾಡುತ್ತಿದ್ದ ಸಾಲಿಗ್ರಾಮ ಕಾರ್ಕಡ ಪಡುಬೈಲ್ನ ಕೃಷ್ಣ ಪೂಜಾರಿ ಹಾಗೂ ಕಾವಡಿಯ ನಾಗೇಶ ಮರಕಾಲನನ್ನು ಬ್ರಹ್ಮಾವರ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದು ಬ್ರಹ್ಮಾವರ ಪೋಲಿಸರಿಗೆ ಒಪ್ಪಿಸಿದ್ದಾರೆ. ಏಳು ಗೋವುಗಳನ್ನು ರಕ್ಷಿಸಲಾಗಿದ್ದು, ಬ್ರಹ್ಮಾವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
- Advertisement -