ಗಂಗೊಳ್ಳಿ: ಸಂತೋಷ ಪೂಜಾರಿ ಅವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತೆಂಗು , ಅಡಿಕೆ ಬೆಳೆಯನ್ನು ಹಾನಿಗೆಡವಿದ್ದನ್ನು ವಿಚಾರಿಸಿದಾಗ ಜೀವ ಬೆದರಿಕೆ ಹಾಕಿರುವ ಘಟನೆ ಬೈಂದೂರಿನ ಪಡುಕೋಣೆಯ ನಾಡ ಗ್ರಾಮದಲ್ಲಿ ನಡೆದಿದೆ.
ಗಿರಿಜಾ ಹಾಗೂ ರವಿ ಎಂಬವರ ವಿರುದ್ಧ ಸಂತೋಷ್ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಗಿರಿಜಾ ಎಂಬವರ ಮನೆಯ ಕೋಳಿ ಸತ್ತುಹೋಗಿದ್ದ ವಿಚಾರಕ್ಕೆ ಗಿರಿಜಾ ಹಾಗೂ ಅವರ ಮನೆಯವರು ಸಂತೋಷ ಪೂಜಾರಿಯವರ ತಾಯಿ ಹಾಗೂ ಅಕ್ಕನ ಬಳಿ ಜಗಳ ಮಾಡಿದ್ದರು.
ಆ ಕಾರಣಕ್ಕೆ ಸಂತೋಷ್ ಅವರು ಗಿರಿಜಾ ಅವರ ಮನೆಯ ತೋಟದಲ್ಲಿ ಬಾಳೆಗಿಡ ಹಾಗೂ ಅಡಿಕೆ ಗಿಡವನ್ನು ತುಂಡರಿಸಿ ತೋಟವನ್ನು ಹಾಳು ಮಾಡಿದ್ದಾರೆ. ಇದರಿಂದ ಸಿಟ್ಟುಗೊಂಡ ಗಿರಿಜಾ ಹಾಗೂ ಮಗ ರವಿ, ಸಂತೋಷ ಪೂಜಾರಿಯವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತೋಟವನ್ನು ಹಾಳು ಮಾಡಿದ್ದಾರೆ.
ಈ ಕುರಿತು ವಿಚಾರಿಸಿದಾಗ ಗಿರಿಜಾ ಹಾಗೂ ಅವರ ಮಗ, ಸಂತೋಷ ಪೂಜಾರಿ ಹಾಗೂ ಅವರ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .