Friday, June 5, 2026
Homeಕರಾವಳಿಮಂಗಳೂರಿನ ಕೆಎಸ್ ಆರ್ ಪಿ ಜಾಗದಲ್ಲಿ ಮರಗಳನ್ನು ಕಡಿದು ಅಕ್ರಮ ಮಾರಾಟ ಶಂಕೆ

ಮಂಗಳೂರಿನ ಕೆಎಸ್ ಆರ್ ಪಿ ಜಾಗದಲ್ಲಿ ಮರಗಳನ್ನು ಕಡಿದು ಅಕ್ರಮ ಮಾರಾಟ ಶಂಕೆ

- Advertisement -
- Advertisement -

ಮಂಗಳೂರು; ಇಲ್ಲಿನ ಕೆಎಸ್ ಆರ್ ಪಿ ಜಾಗದಲ್ಲಿ ಮರಗಳನ್ನು ಕಡಿದು ಅಕ್ರಮ ಮಾರಾಟ ಮಾಡಿರುವ  ಶಂಕೆ ವ್ಯಕ್ತವಾಗಿದೆ.

ನಗರದ  ಹೊರವಲಯದ ಅಸೈಗೋಳಿಯ ಕೆಎಸ್ ಆರ್ ಪಿ 7ನೇ ಬೆಟಾಲಿಯನ್ ನಲ್ಲಿ ಸಾಕಷ್ಟು ಮೌಲ್ಯದ ಹಲವು, ಅಕೇಶಿಯಾ ಮರಗಳನ್ನು ಕಡಿದು ಮಾರಾಟ ಮಾಡಲಾಗಿದೆ.

6 ಹಲಸಿನ ಮರ, 1 ಅಕೇಶಿಯಾ ಮರ ಸೇರಿ ಹತ್ತಕ್ಕೂ ಅಧಿಕ ಮರಗಳು ನಾಪತ್ತೆಯಾಗಿದೆ. ಅರಣ್ಯ ಇಲಾಖೆ ಗಮನಕ್ಕೆ ತರದೇ ಲಕ್ಷಾಂತರ ಮೌಲ್ಯದ ಮರಗಳನ್ನು ಮಾರಾಟ‌ ಮಾಡಲಾಗಿದೆ ಎಂಬ ಆರೋಪ ಕೇಳಿ‌ ಬಂದಿದೆ.
ಅನಧಿಕೃತವಾಗಿ ಬೆಟಾಲಿಯನ್ ಅಧಿಕಾರಿಗಳೇ ಮರ ಕಡಿದಿರೋ ಶಂಕೆ ವ್ಯಕ್ತ ವಾಗಿದ್ದು,ಸದ್ಯ ಕೆಲ ಮರದ ಬುಡಗಳಿಗೆ ಅಧಿಕಾರಿಗಳು ಮಣ್ಣು ಹಾಕಿ ಮುಚ್ಚಿದ್ದಾರೆ.

ಲಕ್ಷಾಂತರ ಮೌಲ್ಯದ ಮರಗಳ ಅಕ್ರಮ ಮಾರಣ ಹೋಮವಾಗಿದ್ದು, ಕ್ಯಾಂಪಸ್ ಗೆ ಎಂಟ್ರಿಯಾಗುವ ದಾರಿ, ಕ್ಯಾಂಟೀನ್ ಜಾಗಗಳಲ್ಲಿ ಮರ ಕಡಿದು ಮಾರಾಟ ಮಾಡಲಾಗಿದೆ.ಇನ್ನು ಪ್ರಕರಣ ಮುಚ್ಚಿ ಹಾಕಲು ಕೆಎಸ್ ಆರ್ ಪಿ ಅಧಿಕಾರಿಗಳ ಉ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ‌ ಬಂದಿದೆ.

- Advertisement -

Latest News

error: Content is protected !!