- Advertisement -
- Advertisement -
ವಿಜಯಪುರ: ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ. ಅವರು ಪೇಮೆಂಟ್ ಮಾಡಿ ಸಿಎಂ ಆಗಿದ್ದಾರೆ. ಮೇಡಂ(ಸೋನಿಯಾ ಗಾಂಧಿ)ಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿರೋದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ನಳಿನ್, ಖರ್ಗೆ, ಪರಮೇಶ್ವರ್ ಸೀನಿಯರ್, ಡಿಕೆಶಿ, ದೇಶಪಾಂಡೆಯಂತಹ ಲೀಡರ್ ನಡುವೆ ಸಿಎಂ ಆಗಿದ್ದು, ಪೇಮೆಂಟ್ ಮಾಡಿಯೇ ತಾನೇ ಎಂದರು. ಮೇಡಂಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸೀಟ್ ಉಳಿಸಿಕೊಂಡಿದ್ದು, ಪೇ ಮಾಡಿಯೇ ಮೇಡಂರನ್ನು ಸಿದ್ದರಾಮಯ್ಯ ಸಂತೋಷ ಪಡೆಸಿದ್ದಾರೆ ಎಂದು ಹೇಳಿದ್ದಾರೆ.
- Advertisement -