- Advertisement -
- Advertisement -
ಉಡುಪಿ : ಗಂಡ ಹೆಂಡತಿ ಜಗಳ, ಪತಿಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಏ. 30ರಂದು ಹೆಬ್ರಿಯ ನಾಲ್ಕೂರಿನ ಮುದ್ದೂರು ಪೇಟೆ ಸಮೀಪ ಮನೆಯಲ್ಲಿ ನಡೆದಿದೆ. ಗಣಪತಿ ನಾಯ್ಕ್ ಮೃತ ವ್ಯಕ್ತಿ. ಲ್ಲಿ ಅಂತ್ಯವಾಗಿರುವ ಘಟನೆ ಏ. 30ರಂದು ಹೆಬ್ರಿಯ ನಾಲ್ಕೂರಿನ ಮುದ್ದೂರು ಪೇಟೆ ಸಮೀಪ ಮನೆಯಲ್ಲಿ ನಡೆದಿದೆ.
ಗಣಪತಿ ನಾಯ್ಕ್ ಅವರು ವಿಪರೀತ ಕುಡಿತದ ಚಟ ಹೊಂದಿದ್ದರು. ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದರು. ಅದೇ ರೀತಿ ಇಂದು ಮಧ್ಯಾಹ್ನ ಸುಮಾರು 2.30 ಗಂಟೆ ವೇಳೆಗೆ ಕುಡಿದು ಹೆಂಡತಿಯೊಂದಿಗೆ ಜಗಳವಾಡಿದ್ದು, ಜಗಳ ಅತಿರೇಕವಾಗಿ ಹೆಂಡತಿ ಕತ್ತಿಯಲ್ಲಿ ಕಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ ಗಂಡ ಗಣಪತಿ ನಾಯ್ಕ್ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -