- Advertisement -
- Advertisement -
ಕುಂದಾಪುರ: ಕುಂದಾಪುರದಲ್ಲಿ ವೀರ ಸಾವರ್ಕರ್ ಬೆಂಬಲಿಸಿ ಮಾನವ ಸರಪಳಿ ರಚನೆ ಮಾಡಲಾಗಿದೆ.
ಕುಂದಾಪುರದ ಹಿಂದೂ ಜಾಗರಣಾ ವೇದಿಕೆ ಮತ್ತು ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಲಾಗಿದೆ.
ಕುಂದಾಪುರದ ಶಾಸ್ತ್ರೀ ಸರ್ಕಲ್ ನಲ್ಲಿ ಅಖಿಲ ಭಾರತಕ್ಕೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಾನವ ಸರಪಳಿ ರಚಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಸಾವರ್ಕರ್ ವಿವಾದದ ಹಿನ್ನಲೆಯಲ್ಲಿ ಮಾನವ ಸರಪಳಿ ನಿರ್ಮಿಸಿ, ನಾನು ಸಾವರ್ಕರ್, ನಾವೂ ಸಾವರ್ಕರ್ ಅಭಿಯಾನ ನಡೆಸಿದ್ದಾರೆ.
ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ ಪಿ ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
- Advertisement -