- Advertisement -
- Advertisement -
ಬೆಳ್ತಂಗಡಿ: ಇಲ್ಲಿನ ಮುಂಡಾಜೆ ಗ್ರಾಮದ ಪೆಲತ್ತಡ್ಕ ಶ್ರೀಧರ್ ಪೂಜಾರಿಯ ಮನೆಯ ಒಂದು ಭಾಗಕ್ಕೆ ನಿನ್ನೆ ಸಂಜೆ ಸುಮಾರು 6 ಗಂಟೆಗೆ ಗುಡ್ಡ ಕುಸಿದಿದೆ. ಮನೆ ಅಪಾಯದಲ್ಲಿದ್ದು ಮನೆಮಂದಿ ಪಕ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಮನೆಯ ಮೇಲೆ ಉಳಿದ ಗುಡ್ಡ ಕುಸಿಯುವ ಸಾಧ್ಯತೆ ಇರುವ ಹಿನ್ನೆಲೆ ಕುಟುಂಬಸ್ಥರು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಇನ್ನು ಸ್ಥಳಕ್ಕೆ ಮುಂಡಾಜೆ ಪಿಡಿಓ ಸುಮಾ , ಅಧ್ಯಕ್ಷ ರಂಜಿನಿ, ವಿಎ ಪ್ರದೀಪ್ ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಮನೆಯಲ್ಲಿ ಇರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ .
- Advertisement -