Sunday, May 19, 2024
Homeಕರಾವಳಿದೇರಳಕಟ್ಟೆ: ಬಿಎಸ್​ಎನ್​ಎಲ್ ಉಪಕೇಂದ್ರದಲ್ಲಿ ಬೆಂಕಿ ಅವಘಡ, ಲಕ್ಷಾಂತರ ರೂ ನಷ್ಟ

ದೇರಳಕಟ್ಟೆ: ಬಿಎಸ್​ಎನ್​ಎಲ್ ಉಪಕೇಂದ್ರದಲ್ಲಿ ಬೆಂಕಿ ಅವಘಡ, ಲಕ್ಷಾಂತರ ರೂ ನಷ್ಟ

spot_img
- Advertisement -
- Advertisement -

ಉಳ್ಳಾಲ: ದೇರಳಕಟ್ಟೆ ಬಿಎಸ್ಎನ್ಎಲ್ ಉಪಕೇಂದ್ರದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕಚೇರಿಯೊಳಗಿದ್ದ ಪರಿಕರಗಳು ಸಂಪೂರ್ಣ ಸುಟ್ಟುಹೋಗಿವೆ. ಈ ಘಟನೆಯಲ್ಲಿ ಸಂಸ್ಥೆಗೆ ಸುಮಾರು 4 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆಯಿಂದಾಗಿ ಉಪಕೇಂದ್ರದಿಂದ ಸಂಪರ್ಕ ಹೊಂದಿರುವ ಬ್ಯಾಂಕ್, ಆಸ್ಪತ್ರೆಗಳಲ್ಲಿ ಸ್ಥಿರ ದೂರವಾಣಿ ಹಾಗೂ ಇಂಟರ್​ನೆಟ್ ಸಮಸ್ಯೆ ಉಂಟಾಗಿದೆ. ಬಹುತೇಕ ಬ್ಯಾಂಕುಗಳ ಸರ್ವರ್ ಸಮಸ್ಯೆಯಿಂದಾಗಿ ಕಾರ್ಯನಿರ್ವಹಿಸದೇ ಗ್ರಾಹಕರು ತೊಂದರೆಗೀಡಾಗಿದ್ದಾರೆ.

ಸರ್ವರ್ ರೂಂ ಕೋಣೆಯೊಳಗೆ ಸೂಕ್ತ ಕೂಲಿಂಗ್ ವ್ಯವಸ್ಥೆ ಇಲ್ಲದ ಕಾರಣ ಹಾಗೂ ರಾತ್ರಿ ವೇಳೆ ಸಿಬ್ಬಂದಿಯಿರದೆ ಇಲ್ಲದಿರುವುದರಿಂದ ಘಟನೆ ಸಂಭವಿಸಿರುವ ಸಾಧ್ಯತೆಯಿದೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

- Advertisement -
spot_img

Latest News

error: Content is protected !!