- Advertisement -
- Advertisement -
ಬಜಪೆ : ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಕ್ಷೇತ್ರದ ತಂತ್ರಿಗಳಾದ ಬಗ್ಗ ಮಜಲು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಪವಿತ್ರ ಗುಹಾ ಪ್ರವೇಶ ಹಾಗೂ ಗುಹಾ ತೀರ್ಥ ಸ್ನಾನಕ್ಕೆ ರವಿವಾರ ತುಲಾ ಸಂಕ್ರಮಣದ ದಿನ ಶುಭ ಮಹೂರ್ತದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ದೀಪ ಬೆಳಗಿಸಿ ಚಾಲನೆ ನೀಡಲಾಯಿತು.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ, ರಾಜ್ಯ ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಎನ್.ವಿ. ವೆಂಕಟರಾಜ ಭಟ್, ಪ್ರಸನ್ನ ಭಟ್ ನೆಲ್ಲಿತೀರ್ಥ, ಅರ್ಚಕ ಗಣಪತಿ ಭಟ್, ಸಂತೋಷ್ ಕುಮಾರ್ ನೀರುಡೆ, ಆನಂದ ಕಾವ ಸಾಂತ್ರಬೈಲು, ಕೃಷ್ಣಪ್ಪ ಪೂಜಾರಿ ನೆಲ್ಲಿತೀರ್ಥ, ಶ್ರೀನಿವಾಸ ಭಟ್ಎನ್, ವಿ.ಜಿ.ಕೆ.ಭಟ್, ಉಪಸ್ಥಿತರಿದ್ದರು
- Advertisement -