ಬೆಳ್ತಂಗಡಿ: ಗ್ರಾಮೀಣ ಕೃಷಿಕರ ಕೃಷಿ ಬದುಕನ್ನು ಹಸನು ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ನೀಡುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು ಅರಸಿನಮಕ್ಕಿಯ ಹತ್ಯಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘಕ್ಕೆ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿ ಆಧಾರದಲ್ಲಿ ಒದಗಿಸಿದೆ.
ಸೋಮವಾರ ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಯಂತ್ರೋಪಕರಣಗಳ ಹಸ್ತಾಂತರವನ್ನು ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ವತಃ ಶಾಸಕರು ಟ್ರಾಕ್ಟರ್ ಚಾಲನೆ ಮಾಡಿ ನೆರೆದವರಲ್ಲಿ ಉತ್ಸಾಹ ಹೆಚ್ಚಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಜನಪ್ರತಿನಿಧಿಗಳು, ಹತ್ಯಡ್ಕ ಪ್ರಾ. ಕೃ. ಪ. ಸಹಕಾರಿ ಸಂಘದ ಉಪಾಧ್ಯಕ್ಷರು, ನಿರ್ದೇಶಕರುಗಳು, ಕಾರ್ಯನಿರ್ವಹಣಾಧಿಕಾರಿಗಳು, ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.
ಏನೇನು ಯಂತ್ರಗಳು ಲಭ್ಯ?
ಟ್ರಾಕ್ಟರ್, ರೀಪರ್ ಯಂತ್ರ (ತೆನೆ ಕಟಾವು), ಮಿನಿ ಡಂಪರ್, ಪೋರ್ಟೆಬಲ್ ಸ್ಪ್ರೇಯರ್ಸ್, ಹುಲ್ಲು ಕಟಾವು ಯಂತ್ರಗಳನ್ನು ಒದಗಿಸಿದೆ. ಹತ್ಯಡ್ಕ, ಶಿಬಾಜೆ, ರೆಖ್ಯ, ಶಿಶಿಲ ಗ್ರಾಮಗಳ ಕೃಷಿಕರಿಗೆ ಅನುಕೂಲವಾಗಲಿದೆ.