Friday, June 26, 2026
Homeಕರಾವಳಿಮಂಗಳೂರುಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ: ಚಿನ್ಮಯ್ ಜಿ.ಕೆ. ಮೊದಲ ಪ್ರಯತ್ನದಲ್ಲೇ...

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ: ಚಿನ್ಮಯ್ ಜಿ.ಕೆ. ಮೊದಲ ಪ್ರಯತ್ನದಲ್ಲೇ ಶೇ.99.6465 ಫಲಿತಾಂಶ

- Advertisement -
- Advertisement -

ಬೆಳ್ತಂಗಡಿ : ಭಾರತೀಯ ಪ್ರತಿಷ್ಠಿತ ಸಂಸ್ಥೆಗಳಾದ ಎನ್‌ಐಟಿ ಹಾಗೂ ಐಐಐಟಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಜೆಇಇ (ಮೇನ್ಸ್)- 2026 ಪರೀಕ್ಷೆಯಲ್ಲಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಶೇ.99.6465 ಪರ್ಸೆಂಟೈಲ್  ಪಡೆಯುವ ಮೂಲಕ ದ.ಕ.ಜಿಲ್ಲೆಗೆ ಹಾಗೂ ಬೆಳ್ತಂಗಡಿ ತಾಲೂಕಿಗೆ ಅದ್ವಿತೀಯ ಸಾಧನೆ ತೋರಿದ್ದಾರೆ.

ಚಿನ್ಮಯ್ ಜಿ.ಕೆ. ಭೌತಶಾಸ್ತ್ರದಲ್ಲಿ ಶೇ.99.5167,ರಸಾಯನಶಾಸ್ತ್ರದಲ್ಲಿ 99.4710, ಗಣಿತದಲ್ಲಿ ಶೇ.99.1618 ಪರ್ಸೆಂಟೈಲ್ ಪಡೆಯುವ ಮೂಲಕ ಒಟ್ಟು ಶೇ.99.6465 ಫಲಿತಾಂಶದೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ.

ಉಳಿದಂತೆ ವಯಕ್ತಿಕ ವಿಷಯದಲ್ಲಿ ನಾಲ್ವರು ವಿದ್ಯಾರ್ಥಿಗಳು ಶೇ.99 ಗಿಂತಲೂ ಅಧಿಕ ಪರ್ಸೆಂಟೈಲ್ ಪಡೆದಿದ್ದು, ಭೌತಶಾಸ್ತ್ರದಲ್ಲಿ ಮನೀಶ್ ಡಿ. ಶೇ.99.6054 ಹಾಗೂ ಪ್ರತೀಕ್ ವಿ.ಎಸ್. ಶೇ.99.5473 ಪರ್ಸೆಂಟೈಲ್ ಪಡೆದಿದ್ದು, ರಸಾಯನಶಾಸ್ತ್ರದಲ್ಲಿ ತನುಶ್ರೀ ಶೇ.99.5115 ಪರ್ಸೆಂಟೈಲ್ ಪ್ರತೀಕ್ ವಿ.ಎಸ್. ಶೇ.99.1198 ಪರ್ಸೆಂಟೈಲ್, ಪ್ರಥಮ್ ಗೋಖಲೆ ಗಣಿತದಲ್ಲಿ 98.9986 ಪರ್ಸೆಂಟೈಲ್ ದಾಖಲಿಸಿ ಎಲ್ಲರ ಚಿತ್ತ ವಿದ್ವತ್ ಕಾಲೇಜಿನತ್ತ ಸೆಳೆಯುವಂತೆ ಮಾಡಿದ್ದಾರೆ.

ಉಳಿದಂತೆ ಪ್ರತೀಕ್ ವಿ.ಎಸ್. ಶೇ.98.8882, ಮನೀಶ್ ಡಿ. ಶೇ.97.5254, ಪ್ರಥಮ್ ಆರ್.ಗೋಖಲೆ ಶೇ.98.2818, ತನುಶ್ರೀ 97.6893 ಫಲಿತಾಂಶ ಪಡೆಯುವ ಮೂಲಕ ಕಾಲೇಜಿಂದ ಪ್ರಥಮ ಬಾರಿಗೆ ಜೆಇಇ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳ ಪೈಕಿ ಐವರು ಈ ಸಾಧನೆ ಮಾಡಿರುವುದು ಕಾಲೇಜಿಗೆ ಹೆಮ್ಮೆ ತಂದಿದೆ.ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಮತ್ತು ಉಪನ್ಯಾಸಕರ ಪರಿಶ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಶ್ರೀ ಪ್ರಜ್ವಲ್ ರೈ, ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಮಂಡಗಳಲೆ, ಪ್ರಾಂಶುಪಾಲರಾದ ಶ್ರೀ ಹರೀಶ್ ಕೆ.ಆರ್, ಪ್ರಶಂಸಿದ್ದಾರೆ.

- Advertisement -

Latest News

error: Content is protected !!