- Advertisement -
- Advertisement -
ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಇಂದು ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಿತು. ಒಟ್ಟು 6 ಜೋಡಿಗಳು ಹಸೆ ಮಣೆಯೇರಿವೆ.
ಅಮರ ಮೂಡೂರಿನ ನವೀನ್ ಕುಮಾರ್ ಮತ್ತು ದುಲಡ್ಕದ ಕವಿತಾ, ಕನಕಪುರದ ರಘುವೀರ ಆರ್ ಮತ್ತು ಮೈಸೂರಿನ ನಿಸರ್ಗ, ಬಂಟ್ವಾಳದ ಮನೋಜ್ ಮತ್ತು ಪುತ್ತೂರು ಪಡೂರಿನ ಜಯಂತಿ, ಮೂಡಬಿದ್ರೆಯ ಸ್ವಾರ್ತಿಕ್ ಮತ್ತು ಬೆಳುವಾಯಿ ಯ ಅನ್ನಪೂರ್ಣ, ನೆಲ್ಲೂರು ಕೆಮ್ರಾಜೆಯ ಸುನೀಲ್ ಬಿ ಎನ್ ಮತ್ತು ಡೊಡ್ಡೆರಿಯ ರಶ್ಮಿ ಡಿ ಕೆ, ಮುರ್ಪೇಯ್ರದ ರಂಜಿತ್ ಎಂ ಮತ್ತು ಪುತ್ತೂರು ಕೊಯಿಲ ದ ಸುಮಿತ್ರಾ ಜೋಡಿಗಳ ವಿವಾಹ ನಡೆಯಿತು.
ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವ ಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪನಾ ಸಮಿತಿ ಯ ಶೋಭಾ ಗಿರಿಧರ್, ವನಜಾ ಭಟ್ ಹಾಗೂ ದೇವಸ್ಥಾನ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Advertisement -