ಉತ್ತರಾಖಂಡ: ವರ್ಷದೊಳಗೆ ಮೊಮ್ಮಗು ಕೊಡಿ ಇಲ್ಲಾ 5 ಕೋಟಿ ಪರಿಹಾರ ನೀಡಿ ಎಂದು ವೃದ್ಧ ದಂಪತಿ ಕೋರ್ಟ್ ರೆ ಹೋಗಿರುವ ಘಟನೆ ಉತ್ತರಾಖಂಡನ ಹರಿದ್ವಾರದಲ್ಲಿ ನಡೆದಿದೆ.
ಹರಿದ್ವಾರದ ನಿವಾಸಿ ಸಂಜೀವ್ ರಂಜನ್ ಪ್ರಸಾದ್ BHELನಿಂದ ಈಗಾಗಲೇ ನಿವೃತ್ತಿ ಪಡೆದುಕೊಂಡಿದ್ದು, ಸದ್ಯ ಪತ್ನಿ ಸಾಧನಾ ಜೊತೆ ಹೌಸಿಂಗ್ ಸೊಸೈಟಿಯಲ್ಲಿ ವಾಸವಾಗಿದ್ದಾರೆ. ಈ ದಂಪತಿ ತಮ್ಮ ಏಕೈಕ ಪುತ್ರ ಶ್ರೇಯ್ ಸಾಗರ್ ಅವರಿಗೆ ನೋಯ್ಡಾ ನಿವಾಸಿ ಶುಭಾಂಗಿ ಸಿನ್ಹಾ ಜೊತೆ 2016ರಲ್ಲಿ ವಿವಾಹ ಮಾಡಿಸಿದ್ದರು. ಶ್ರೇಯ್ ಪೈಲಟ್ ಆಗಿದ್ದರೆ, ಶುಭಾಂಗಿ ನೋಯ್ಡಾದಲ್ಲಿ ಕೆಲಸ ಮಾಡ್ತಿದ್ದಾರೆ.
ಮದುವೆಯಾಗಿ ಆರು ವರ್ಷ ಕಳೆದರೂ ಇವರಿಗೆ ಮಕ್ಕಳಾಗಿಲ್ಲ. ಅದಕ್ಕಾಗಿ ಇಬ್ಬರೂ ಯಾವುದೇ ರೀತಿಯ ಪ್ಲಾನಿಂಗ್ ಮಾಡ್ತಿಲ್ಲ ಎಂದು ಆರೋಪ ಮಾಡಿರುವ ವೃದ್ಧ ದಂಪತಿ ಇದೀಗ ಹರಿದ್ವಾರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಮಗೆ ಒಂದು ವರ್ಷದೊಳಗೆ ಮೊಮ್ಮಕ್ಕಳನ್ನ ನೀಡುವಂತೆ ಅಥವಾ ತಾವು ಖರ್ಚು ಮಾಡಿರುವ 5 ಕೋಟಿ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ವಾಪಸ್ ನೀಡುವಂತೆ ದೂರು ದಾಖಲಿಸಿದ್ದಾರೆ.