ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಸಮರ್ಥ್ ದೀಕ್ಷಿತ್
ಚೌಡೇಶ್ವರಿ ದೇವಿಯ ಆರಾಧಕರು
ಸ್ತ್ರೀ ವಶೀಕರಣ ಪುರುಷ ವಶೀಕರಣ ಮನೆಯಲ್ಲಿ ಶಾಂತಿ ವಿದ್ಯಾಭ್ಯಾಸ ಶತ್ರು ನಾಶ ಸಾಲದ ಬಾಧೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಕರೆ ಮಾಡಿ
+91 95353 12045
ಪತಿ-ಪತ್ನಿ ಮಧ್ಯೆ ಸಣ್ಣ ಪುಟ್ಟ ಜಗಳಗಳಾಗೋದು ಸಾಮಾನ್ಯ ಸಂಗತಿ. ಆದ್ರೆ ಗಲಾಟೆ ಮತ್ತೆ ಮತ್ತೆ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ದಾಂಪತ್ಯದಲ್ಲಿ ಪ್ರೀತಿ ಕಾಣೆಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ.
ಮದುವೆಗೆ ಮುನ್ನ ವಧು – ವರರ ಹೆಸರು, ಗುಣವನ್ನು ನೋಡಲಾಗುತ್ತದೆ. ಇದ್ರಲ್ಲಿ ದೋಷ ಕಂಡು ಬಂದಲ್ಲಿ ದಾಂಪತ್ಯ ಸುಖಮಯವಾಗಿರುವುದಿಲ್ಲ. ಗುಣ ದೋಷ, ನಾಡಿ ದೋಷ ಸೇರಿದಂತೆ ಅನೇಕ ದೋಷಗಳು ದಾಂಪತ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತದೆ.
ವರ ಅಥವಾ ವಧುವಿನಲ್ಲಿ ಮಂಗಳ ದೋಷವಿದ್ದು, ಅದಕ್ಕೆ ಪರಿಹಾರ ಮಾಡಿಕೊಳ್ಳದೆ ವಿವಾಹವಾದಲ್ಲಿ ದಾಂಪತ್ಯದಲ್ಲಿ ಸಮಸ್ಯೆ ಕಂಡು ಬರುತ್ತದೆ. ಮಂಗಳ, ವ್ಯಕ್ತಿಯ ಗಂಭೀರ ಹಾಗೂ ಮೊಂಡುತನವನ್ನು ಪ್ರತಿನಿಧಿಸುತ್ತದೆ. ಇದ್ರಿಂದ ವಾದ – ವಿವಾದ ಹೆಚ್ಚಾಗುತ್ತದೆ.
ಪತಿ ಅಥವಾ ಪತ್ನಿ ಜಾತಕದಲ್ಲಿ ಶುಕ್ರ ಕೆಳ ಸ್ಥಾನದಲ್ಲಿದ್ದರೆ ಅಥವಾ ಅಷ್ಟಮ ಸ್ಥಾನದಲ್ಲಿದ್ದರೆ ಗಲಾಟೆಯಾಗುವ ಸಾಧ್ಯತೆಯಿರುತ್ತದೆ. ಜಾತಕದ ಏಳನೇ ಸ್ಥಾನದಲ್ಲಿ ಸೂರ್ಯ, ಶನಿ, ರಾಹು, ಕೇತು ಮತ್ತು ಮಂಗಳ ಇವುಗಳಲ್ಲಿ ಯಾವುದೇ ಗ್ರಹವಿದ್ದರೂ ದಾಂಪತ್ಯದಲ್ಲಿ ಅಶುಭ ಫಲ ಪ್ರಾಪ್ತಿಯಾಗುತ್ತದೆ.
ಜಾತಕದಲ್ಲಿ ದೋಷ ಕಂಡು ಬಂದರೆ ಅದನ್ನು ಅವಶ್ಯವಾಗಿ ನಿವಾರಣೆ ಮಾಡಿಕೊಳ್ಳಬೇಕು. ಶಿವನ ಜೊತೆ ತಾಯಿ ಪಾರ್ವತಿ ಪೂಜೆಯನ್ನು ಮಾಡಬೇಕು. ವೈವಾಹಿಕ ಜೀವನದಲ್ಲಿ ಶಾಂತಿ ನೀಡುವಂತೆ ಪ್ರಾರ್ಥನೆ ಮಾಡಬೇಕು. ಮಂಗಳ ಗ್ರಹ ದೋಷಕ್ಕೆ ಮಂಗಳವಾರ ಪೂಜೆ ಮಾಡಬೇಕು.