ಕೋಲಾರ: ಆಘಾತಕಾರಿ ಘಟನೆಯೊಂದರಲ್ಲಿ, ಕರ್ನಾಟಕದ ಕೋಲಾರ ಜಿಲ್ಲೆಯ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯ ಹುಟ್ಟುಹಬ್ಬದಂದು ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.
ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಆರೋಪಿಗಳನ್ನು ಆನಂದ್ ಕುಮಾರ್, ಕಾಂತರಾಜು, ಪ್ರವೀಣ್ ಮತ್ತು ವೇಣು ಎಂದು ಗುರುತಿಸಲಾಗಿದೆ. ಮೂವರು ಮೇಸ್ತ್ರಿಗಳು ಮತ್ತು ಒಬ್ಬರು ಬಸ್ ಚಾಲಕ.
ಪೊಲೀಸರ ಪ್ರಕಾರ, 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ತನಗೆ ಹೊಸ ಬಟ್ಟೆ ಮತ್ತು ಚಾಕೊಲೇಟ್ಗಳನ್ನು ಖರೀದಿಸದಿದ್ದಕ್ಕೆ ಪೋಷಕರ ಮೇಲೆ ಕೋಪಗೊಂಡಿದ್ದು, ಶಾಲೆಗೆ ಹೋಗದೆ ಶುಕ್ರವಾರ ಬಂಗಾರಪೇಟೆಗೆ ಬಸ್ ಹತ್ತಿದಳು.
ಆಕೆಯನ್ನು ಒಬ್ಬಳೇ ನೋಡಿದ ದುಷ್ಕರ್ಮಿಗಳು ಆಕೆಯೊಂದಿಗೆ ಮುದ್ದಾಗಿ ಮಾತನಾಡಿ ಉದ್ಯಾನವನಕ್ಕೆ ಕರೆದೊಯ್ದು ಸಂಜೆಯವರೆಗೂ ಕಾಲ ಕಳೆದಿದ್ದಾರೆ.
ತಡರಾತ್ರಿ ಆರೋಪಿಗಳು ಆಕೆಯನ್ನು ಖಾಸಗಿ ಬಸ್ನಲ್ಲಿ ತಣಿಮಡಗು ಗ್ರಾಮಕ್ಕೆ ಕರೆದೊಯ್ದಿದ್ದಾರೆ. ದಾರಿಯಲ್ಲಿ ಆರೋಪಿಗಳು ಮದ್ಯ ಸೇವಿಸಿ ಪ್ರತ್ಯೇಕ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಬಾಲಕಿಯ ಕಿರುಚಾಟ ಕೇಳಿದ ಗ್ರಾಮಸ್ಥರು ಕಾಮಸಮುದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾಲಕಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.