- Advertisement -
- Advertisement -
ಮುಜಾಫರ್ನಗರ: ಇಲ್ಲಿನ ನಿರ್ಧಾನ ಗ್ರಾಮದಲ್ಲಿ ದೂರದ ಸಂಬಂಧಿಯೊಬ್ಬರ ಮದುವೆಗೆ ತಾಯಿ ತಮ್ಮನನ್ನು ಕರೆದುಕೊಂಡು ಹೋದಳು ಎಂದು ಎಂಟು ವರ್ಷದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡದೆ ಶವಸಂಸ್ಕಾರ ಮಾಡಲಾಗಿದೆ.
ಮದುವೆಗೆ ತಾನೂ ಬರುವುದಾಗಿ ಮಗಳು ಅದೆಷ್ಟೇ ಗೋಗರೆದರೂ ಕೇಳದೆ, ಅವಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ ತಾಯಿಯ ವಿರುದ್ಧ ಕೋಪಗೊಂಡ ಮಗಳು ಈ ಕೃತ್ಯ ವೆಸಗಿದ್ದಾಳೆ ಮನೆಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡು ಕೋಣೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
- Advertisement -