Sunday, June 29, 2025
Homeತಾಜಾ ಸುದ್ದಿನನ್ನ ಹೆಂಡ್ತಿಗೆ ಯಾಕೆ ಕಾಲ್ ಮಾಡ್ತಿಯಾ ಅಂತಾ ಪ್ರಶ್ನಿಸಿದ್ದಕ್ಕೆ ನಡೆದೇ ಹೋಯ್ತು ಕೊಲೆ...

ನನ್ನ ಹೆಂಡ್ತಿಗೆ ಯಾಕೆ ಕಾಲ್ ಮಾಡ್ತಿಯಾ ಅಂತಾ ಪ್ರಶ್ನಿಸಿದ್ದಕ್ಕೆ ನಡೆದೇ ಹೋಯ್ತು ಕೊಲೆ…

spot_img
- Advertisement -
- Advertisement -

ಬೆಂಗಳೂರು: ಹೆಂಡತಿ ಮೊಬೈಲ್​ಗೆ ಫೋನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎನ್ಕ್ಲೇವ್ ಅಪಾರ್ಟ್ಮೆಂಟ್​ನಲ್ಲಿ ನಡೆದಿದೆ. ಅಂದ್ರಹಳ್ಳಿಯ ಪ್ರಸನ್ನ ಬಡಾವಣೆಯ ನಿವಾಸಿ ಕೇದಾರ್ ಸಹಾನಿ ಕೊಲೆಯಾದ ವ್ಯಕ್ತಿ.

ಸೆಪ್ಟೆಂಬರ್ 5ರಂದು ರಾತ್ರಿ ಈ ದುರ್ಘಟನೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ. ಆರೋಪಿ ರಾಹುಲ್ ಚೋಟಾ ಲಾಲ್ ಮತ್ತು ಮೃತ ಕೇದಾರ್ ಸಹಾನಿ ಪೈಂಟಿಗ್ ಕೆಲಸ‌ ಮಾಡಿಕೊಂಡಿದ್ದರು. ಕೇದಾರ್ ಪತ್ನಿ ಕುಸುಮಾ ಮೊಬೈಲ್​ಗೆ ರಾಹುಲ್ ಆಗಾಗ ಕರೆ ಮಾಡ್ತಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಜೊತೆ ಜಗಳ‌ ಮಾಡಿದ್ದ.

ಇನ್ನು ಕೊಲೆ ನಡೆದ ದಿನ ಮಾತನಾಡುವ ಬಾ ಎಂದು ಅಪಾರ್ಟ್ಮೆಂಟ್ ಬಳಿ ರಾಹುಲ್ ಕೇದಾರ್​ನನ್ನು ಕರೆಸಿಕೊಂಡು ಕಂಠ ಪೂರ್ತಿ ಎಣ್ಣೆ ಕುಡಿಸಿ ಸಿಲಿಂಡರ್​ನಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಮೃತ ದೇಹವನ್ನು ಅದೇ ಅಪಾರ್ಟ್ಮೆಂಟ್​ನ ಕಾಪೌಂಡ್​ನಲ್ಲಿ ಮೂಟೆ ‌ಕಟ್ಟಿ ಎಸೆದು ಸಿಮ್ ಬಿಸಾಕಿ ಬಿಹಾರದಲ್ಲಿ ತಲೆ ಮರೆಸಿಕೊಂಡಿದ್ದ. ಸದ್ಯ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರಾಜೀವ್ ಅಂಡ್ ಟೀಂ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!