Tuesday, May 14, 2024
Homeತಾಜಾ ಸುದ್ದಿತಾಯಿಯ ಅಂತ್ಯಸಂಸ್ಕಾರಕ್ಕೆ ಜಾಗ ಕೊಡುವಂತೆ ರಾತ್ರಿಯಿಡೀ ಮಗ ಬೇಡಿದರೂ ಸ್ಥಳ ನೀಡದ ನಿಷ್ಕರುಣಿ ತಂದೆ

ತಾಯಿಯ ಅಂತ್ಯಸಂಸ್ಕಾರಕ್ಕೆ ಜಾಗ ಕೊಡುವಂತೆ ರಾತ್ರಿಯಿಡೀ ಮಗ ಬೇಡಿದರೂ ಸ್ಥಳ ನೀಡದ ನಿಷ್ಕರುಣಿ ತಂದೆ

spot_img
- Advertisement -
- Advertisement -

ಶಿವಮೊಗ್ಗ: ಕ್ಯಾನ್ಸರ್​ನಿಂದ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜಾಗ ಕೊಡುವಂತೆ ತಂದೆ ಬಳಿ ಮಗ ಗೋಗರೆಯುತ್ತ ರಾತ್ರಿಯಿಡೀ ಮನೆ ಬಾಗಿಲಲ್ಲೇ ಅಮ್ಮನ ಶವ ಇಟ್ಟುಕೊಂಡು ಕಣ್ಣೀರಿಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​ಪೇಟೆ ಸಮೀಪದ ಹೆದ್ದಾರಿ ಪುರ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಯಡಗುಡ್ಡೆ ಗ್ರಾಮದ ನಾಗರಾಜ್ ಅವರ ಮೊದಲ ಪತ್ನಿ ನಾಗರತ್ನ(50) ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದರು. ಪತಿ ನಾಗರಾಜ್, ಪತ್ನಿಯ ಅಂತ್ಯಕ್ರಿಯೆಗೆ ಜಾಗ ಕೊಡಲ್ಲ ಎಂದು ಪಟ್ಟು ಹಿಡಿದರು. ಇವರ ಪುತ್ರ ಗಣೇಶ್​, ತಾಯಿಯ ಅಂತ್ಯಸಂಸ್ಕಾರಕ್ಕಾಗಿ ರಾತ್ರಿಯಿಡೀ ಮನೆ ಮುಂದೆ ಕಾಯುತ್ತ ಕುಳಿತರೂ ಬಾಗಿಲು ಹಾಕಿಕೊಂಡು ತಂದೆ ನಾಗರಾಜ್ ಒಳಗೆ ಇದ್ದರು.

ರಾತ್ರಿಯಿಡೀ ಮನೆ ಮುಂದೆ ಶವ ಇಟ್ಟುಕೊಂಡು ಮಗ ಕುಳಿತರೂ ತಂದೆಯ ಮನಸ್ಸಿ ಕರಗಲಿಲ್ಲ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ರಿಪ್ಪನ್​ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಮನವೊಲಿಸಿದರೂ ನಾಗರಾಜ್​ ಒಪ್ಪಲಿಲ್ಲ. ಈ ಕ್ಷಣದವರೆಗೂ ರಾಜಿ ಪಂಚಾಯಿತಿ ನಡೆಯುತ್ತಲೇ ಇದೆ.

- Advertisement -
spot_img

Latest News

error: Content is protected !!