Sunday, May 19, 2024
Homeಅಪರಾಧಚಿಕ್ಕಮಗಳೂರು:ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಫೋನ್ ಕರೆ; ಒಂದು ಲಕ್ಷ ರೂ ಕಳೆದುಕೊಂಡ ವ್ಯಕ್ತಿ

ಚಿಕ್ಕಮಗಳೂರು:ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಫೋನ್ ಕರೆ; ಒಂದು ಲಕ್ಷ ರೂ ಕಳೆದುಕೊಂಡ ವ್ಯಕ್ತಿ

spot_img
- Advertisement -
- Advertisement -

ಬಣಕಲ್: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಸಂಖ್ಯೆ ಹೇಳಿ ವ್ಯಕ್ತಿಯೊಬ್ಬರು ಸುಮಾರು 1 ಲಕ್ಷ ರೂ ಹಣ ಕಳೆದುಕೊಂಡ ಘಟನೆ ಜಾವಳಿ ಗ್ರಾಮದಲ್ಲಿ ನಡೆದಿದೆ.



ಜಾವಳಿ ಗ್ರಾಮದ ಕೃಷ್ಣೇಗೌಡ ಎಂಬುವವರ ಮೊಬೈಲ್ ಗೆ ನಂಬರಿಗೆ +91834685364 ನಂಬರಿಂದ ಕರೆ ಬಂದಿದ್ದು , ಕರೆ ಮಾಡಿದ ವ್ಯಕ್ತಿ ಜಾವಳಿ ಬ್ಯಾಂಕ್ ವೊಂದರ ಮ್ಯಾನೇಜರ್ ಎಂದು ತಿಳಿಸಿದ್ದು ಬ್ಯಾಂಕಿನಿಂದ ಎ ಟಿ ಎಂ ಕಾರ್ಡ್ ನೀಡಲು ಈಗ ಮೊಬೈಲ್ ಗೆ ಬಂದಿರುವ ಒಟಿಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿದ್ದಾನೆ.

ಕೃಷ್ಣೇಗೌಡ ಅವರು ತಮ್ಮ ಮೊಬೈಲ್ ಗೆ ಬಂದ ಒಟಿಪಿ ಸಂಖ್ಯೆ ಯನ್ನು ನೀಡಿದ್ದಾರೆ. ಅದು ಆದತಕ್ಷಣ ಕೆಲವೇ ಸೆಕೆಂಡ್ ಗಳಲ್ಲಿ ಕೃಷ್ಣೇಗೌಡರ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ ಹಣ ಡ್ರಾ ಆಗಿದೆ. ಅನುಮಾನಗೊಂಡ ಕೃಷ್ಣೇಗೌಡ ಅವರೂ ಕೂಡಲೇ ಜಾವಳಿಯ ಬ್ಯಾಂಕ್ ಗೆ ವಿಚಾರಿಸಿದಾಗ ತಾವೂ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಾವಳಿಯ ಕೃಷ್ಣೇಗೌಡ ಅವರು ಚಿಕ್ಕಮಗಳೂರು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!