Saturday, May 18, 2024
Homeತಾಜಾ ಸುದ್ದಿಇಬ್ಬರು ಸಹೋದರರು ಸೇರಿದಂತೆ ಐವರು ನದಿಯಲ್ಲಿ ಮುಳುಗಿ ಸಾವು

ಇಬ್ಬರು ಸಹೋದರರು ಸೇರಿದಂತೆ ಐವರು ನದಿಯಲ್ಲಿ ಮುಳುಗಿ ಸಾವು

spot_img
- Advertisement -
- Advertisement -

ಕೊಯಮತ್ತೂರು: ಯುವಕರ ಗುಂಪೊಂದು ನದಿಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಸಹೋದರರು ಸೇರಿದಂತೆ ಐವರ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಯಮತ್ತೂರು(ತಮಿಳುನಾಡು)ನಲ್ಲಿ ನಡೆದಿದೆ.

ಶುಕ್ರವಾರದಂದು ಐವರು ಸ್ನೇಹಿತರು ವಾಲ್ದಾರೈಗೆ ಪ್ರವಾಸ ಕೈಗೊಂಡಿದ್ದು, ಇಲ್ಲಿನ ನಲ್ಲಕಾತು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಮೃತರನ್ನು ಎಸ್. ನಫಿಲ್, ಆರ್. ಅಜಯ್, ಆರ್. ಧನುಷ್, ಆರ್. ವಿನಿತ್ ಮತ್ತು ಶರತ್ ಎಂದು ಗುರುತಿಸಲಾಗಿದೆ.

ಐವರು ಯುವಕರಲ್ಲಿ ನಫಿಲ್, ಅಜಯ್, ಮತ್ತು ಧನುಷ್ ಬಿಎಸ್ಸಿ ಅಂತಿಮ ವರ್ಷ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೊಯಮತ್ತೂರು ಸಮೀಪದ ಖಾಸಗಿ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿನಿತ್ ಇತ್ತೀಚೆಗಷ್ಟೇ ಎಂ.ಎಸ್ಸಿ ಮುಗಿಸಿದ್ದ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ವಾಲ್ವಾರೈನಲ್ಲಿ ಬೀಡುಬಿಟ್ಟಿದ್ದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ವಿ. ಮುತ್ತುಪಾಂಡಿ ನೇತೃತ್ವದ ರಕ್ಷಣಾ ತಂಡವು ಗಂಟೆಯೊಳಗೆ ಎಲ್ಲ ಮೃತದೇಹಗಳನ್ನು ಹೊರ ತೆಗೆದಿದ್ದು, ಮೃತದೇಹಗಳನ್ನು ವಾಲ್ವಾರೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -
spot_img

Latest News

error: Content is protected !!