- Advertisement -
- Advertisement -
ಸುಳ್ಯ: ಕಳೆದ ನಾಲ್ಕೈದು ದಿನಗಳಿಂದ ಕರಾವಳಿ, ಕೊಡಗಿನ ಗಡಿಭಾಗದಲ್ಲಿ ಭರ್ಜರಿ ಮಳೆಯಾಗುತ್ತಿರುವುದರಿಂದ ನದಿಗಳು ತುಂಬಿ ಹರಿಯುತ್ತಿವೆ, ಸಂಪಾಜೆ ಸಮೀಪದ ಕೊಯನಾಡು ಬಳಿ ಪಯಶ್ವಿನಿ ನದಿಯಿಂದ ಬಂದ ಮೀನುಗಳು ಮಡಿಕೇರಿ-ಮಂಗಳೂರು ಹೆದ್ದಾರಿ ಬದಿಯ ಚರಂಡಿಯಲ್ಲಿ ಕಾಣ ಸಿಗುತ್ತಿದ್ದು. ಸ್ಥಳೀಯ ಗ್ರಾಮಸ್ಥರು ಮುಗಿಬಿದ್ದು ಮೀನು ಹಿಡಿಯುತ್ತಿದ್ದಾರೆ.
ಚರಂಡಿಗಿಳಿದು ಗಂಡಸರು ಹೆಂಗಸರು ಮೀನು ಹಿಡಿಯುತ್ತಿದ್ದಾರೆ. ಇನ್ನು ಚರಂಡಿಯಿಂದ ಹಾರಿ ರಸ್ತೆಯಲ್ಲಿ ಮೀನಗಳ ಒದ್ದಾಡುವ ದೃಶ್ಯಗಳು ಕಂಡು ಬರುತ್ತಿದ್ದು, ಮತ್ಸ್ಯ ಪ್ರಿಯರಿಗಂತೂ ಇಂದು ಭರ್ಜರಿ ಬಾಡೂಟ.
- Advertisement -