- Advertisement -
- Advertisement -
ವಿಶಾಖಪಟ್ಟಣಂ : ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಿಥಿಲಾಪುರಿ ಉಡಾ ಕಾಲೋನಿಯಲ್ಲಿ ನಡೆದಿದೆ.
ಉಡಾ ಕಾಲೋನಿಯ ಬಂಗಾರುನಾಯ್ಡು (50), ಡಾ. ನಿರ್ಮಲಾ (44), ಮಕ್ಕಳಾದ ದೀಪಕ್ (22), ಕಶ್ಯಪ್ (19) ಮೃತ ದುರ್ದೈವಿಗಳು. ಮೃತರೆಲ್ಲರೂ ಒಂದೇ ಕುಟುಂಬದವರು ಎನ್ನಲಾಗಿದೆ.
ಮೃತರು ಎನ್ ಆರ್ ಐ ಕುಟುಂಬದವರು ಎನ್ನಲಾಗಿದ್ದು, ಕಳೆದ 8 ತಿಂಗಳ ಹಿಂದೆ ವಿಶಾಖಪಟ್ಟಣಂ ಆದಿತ್ಯ ಟವರ್ಸ್ ನಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಕುಟುಂಬ ಬೆಂಕಿಗಾಹುತಿಯಾಗಿದೆ
- Advertisement -