Friday, March 29, 2024
Homeತಾಜಾ ಸುದ್ದಿಲಾಕ್ ಡೌನ್ ಸಮಯದಲ್ಲಿ ಮೆಡಿಕಲ್ ಗೆ ಹೋಗಿದ್ದಕ್ಕೆ ಬಂಟ್ವಾಳ ತಾ.ಪಂ.ಸದಸ್ಯನ ಮೇಲೆ ASIಯಿಂದ ಹಲ್ಲೆ

ಲಾಕ್ ಡೌನ್ ಸಮಯದಲ್ಲಿ ಮೆಡಿಕಲ್ ಗೆ ಹೋಗಿದ್ದಕ್ಕೆ ಬಂಟ್ವಾಳ ತಾ.ಪಂ.ಸದಸ್ಯನ ಮೇಲೆ ASIಯಿಂದ ಹಲ್ಲೆ

spot_img
- Advertisement -
- Advertisement -

ಬಂಟ್ವಾಳ: ಮೆಡಿಕಲ್ ಶಾಪ್ ಗೆ ಬಂದ ತಾಲೂಕು ಪಂಚಾಯತ್ ಸದಸ್ಯನ ಮೇಲೆ ಕಲ್ಲಡ್ಕದಲ್ಲಿ ಬಂಟ್ವಾಳ ಏಎಸ್ ಐ ಹಲ್ಲೆ ನಡೆಸಿದ್ದು, ಇದನ್ನು ಸಾರ್ವಜನಿಕರು ಪ್ರಶ್ನಿಸಿದದ ಘಟನೆ ಇಂದು ಬೆಳಗ್ಗೆ ಕಲ್ಲಡ್ಕದಲ್ಲಿ ನಡೆದಿದೆ.

ಲಾಕ್ ಡೌನ್ ನಿಯಮಾವಳಿಯಂತೆ ಬೆಳಗ್ಗೆ 9 ಗಂಟೆಯ ಬಳಿಕ ಕಲ್ಲಡ್ಕದಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಪೋಲೀಸರು ಸೂಚಿಸುತ್ತಿದ್ದರು. ಈ ವೇಳೆ ಕಾರು ನಿಲ್ಲಿಸಿ ಮೆಡಿಕಲ್ ಶಾಪ್ ಗೆ ಬರುತ್ತಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಹಾಲಿ ಬಿಜೆಪಿ ಸದಸ್ಯ ಮಹಾಬಲ ಆಳ್ವ ಗೋಳ್ತಮಜಲು ಅವರ ಮೇಲೆ ಬಂಟ್ವಾಳ ನಗರ ಠಾಣೆಯ ಏಎಸ್ ಐ ಒಬ್ಬರು ಲಾಠಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮಹಾಬಲ ಮತ್ತು ಏ.ಎಸೈ ನಡುವೆ ಮಾತಿಗೆ ಮಾತು ಬೆಳೆದು ಏಕಾಏಕಿ ಮಹಾಬಲ ಆಳ್ವ ಮತ್ತು ಏಎಸ್ ಐ ಕೈ ಮಿಲಾಯಿಸಿಕೊಂಡಿದ್ದಾರೆ. ಇದರಿಂದ ಮಹಾಬಲ ಅವರ ತಲೆಗೆ ಸಣ್ಣ ಗಾಯವಾಗಿದೆ ಎಂದು ತಿಳಿದು ಬಂದಿದೆ. ಅಗತ್ಯ ಸಾಮಗ್ರಿಗಳ ಖರೀದಿಗೆ ಬಂದವರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ ಎಂದು ಆರೋಪಿಸಿ ನಾಗರಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಕೆಲವು ಹೊತ್ತು ವಾಗ್ವಾದ ನಡೆಯಿತು.

ಬಳಿಕ ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣಾ ಎಸ್ ಐ ಅವಿನಾಶ್ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

- Advertisement -
spot_img

Latest News

error: Content is protected !!