- Advertisement -
- Advertisement -
ತುಳುನಾಡಿನ ಹೆಮ್ಮೆಯ ಕಲೆ ಹುಲಿವೇಷ ಧರಿಸಿ, ತುಳುನಾಡಿನ ಬಾವುಟ ಪ್ರದರ್ಶಿಸಿದ ಮುಂಡೈನಜೆಡ್ಲುವಿನ ಸಾಹಸಿ ಯುವಕ ಹರ್ಷೇಂದ್ರ ಇವರು ಬ್ರಹ್ಮಾವರದಿಂದ ಕಾಶ್ಮೀರದವರೆಗೆ 2800 ಕಿ. ಮೀ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ 55 ದಿನದಲ್ಲಿ ತಲುಪಿದ್ದರು.
ಉಡುಪಿಯ ಕುಂಜಿಬೆಟ್ಟಿವಿನ ಶ್ರೀಮತಿ ಶೈಲಾ ಅನಂತಕೃಷ್ಣ ದಂಪತಿ ಹಾಗೂ ‘ತಕ್ಷಕ್ ಮತ್ತು ಅಕ್ಷತ್” ಹುಲಿವೇಷ ತಂಡದ ವತಿಯಿಂದ ಗೌರವ ಪೂರ್ವಕವಾಗಿ ಇವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಯುವಕನ ತಾಯಿ ಯಶೋದಾ ಆಚಾರ್ಯ, ಚೇರ್ಕಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಖಾ ಎನ್ ಭಟ್ ಹಾಗೂ ರಾಧಾಕೃಷ್ಣ ಸಾಮಂತ್ ಮತ್ತಿತರರು ಉಪಸ್ಥಿತರಿದ್ದರು.
- Advertisement -