Saturday, May 4, 2024
Homeಕರಾವಳಿಉಡುಪಿಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಇಲಾಖೆಯ ನೌಕರನ ಜಮೀನು ಮಾರಾಟ !

ಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಇಲಾಖೆಯ ನೌಕರನ ಜಮೀನು ಮಾರಾಟ !

spot_img
- Advertisement -
- Advertisement -

ಕುಂದಾಪುರ: ನಕಲಿ ದಾಖಲೆ ಸೃಷ್ಟಿ ಮಾಡಿ ಕಂದಾಯ ಇಲಾಖೆಯ ನೌಕರರಾದ ಬಿ ಶಿವಮಲ್ಲುರವರ ಜಾಗ ಮಾರಾಟ ಮಾಡಿ ವಂಚನೆ ಮಾಡಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ .

ಬಿ ಶಿವಮಲ್ಲು ಅವರು ಬ್ರಹ್ಮಾವರ ತಾಲೂಕಿನ ದ್ವಿತೀಯ ದರ್ಜೆ ಸಹಾಯಕ ನೌಕರರಾಗಿದ್ದು , ಇವರಿಗೆ 2000 ದ ಮಾ .16 ರಂದು ತಲ್ಲೂರು ಗ್ರಾಮದ ಸರಕಾರಿ ನೌಕರರ ಬಡಾವಣೆಯಲ್ಲಿ ಸರ್ವೇ ನಂ 162 / 2B5 ರಲ್ಲಿ 11 ನೆಯ ಮನೆ ನಿವೇಶನವು ಮಂಜೂರಾಗಿತ್ತು .

ಇವರು ಜಾಗ ಮಾರಾಟದ ಉದ್ದೇಶದಿಂದ ಜಾಗದ ಋಣಬಾರ ಪತ್ರವನ್ನು ಪಡೆಯಲು ಕುಂದಾಪುರ ಸಬ್ ರಿಜಿಸ್ಟ್ರಾರರನ್ನು ಸಂಪರ್ಕಿಸಿದಾಗ ಜಾಗವು ಈಗಾಗಲೇ ಮಾರಾಟವಾಗಿರುವುದು ತಿಳಿದು ಬಂದಿದೆ . ಈ ಕುರಿತು ಬಿ ಶಿವಮಲ್ಲುರವರು ಕ್ರಯಪತ್ರದ ಧೃಢೀಕೃತ ನಕಲನ್ನು ಪರಿಶೀಲಿಸಿದಾಗ ಬಿ ಶಿವಮಲ್ಲು ರವರ ಪೋರ್ಜರಿ ಸಹಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವುದು ಬಯಲಾಗಿದೆ.

ಕುಂದಾಪುರದ ಪ್ರೇಮಾ ಲಕ್ಷ್ಮಣ ನಾಯಕ್ , ಹಾಗೂ ಜೋನ್ ಮಿನೇಜಸ್ ಎಂಬಿಬ್ಬರು ಸೇರಿಕೊಂಡು ಬಿ ಶಿವಮಲ್ಲುರವರ ಹೆಸರಿನಲ್ಲಿರುವ ನಿವೇಶನದ ನಕಲಿದಾಖಲೆ ಸೃಷ್ಟಿಸಿ , ಶಿವಮಲ್ಲು ಅವರಿಗೆ ತಿಳಿಯದಂತೆ ಜಾಗವನ್ನು ಮಾರಾಟ ಮಾಡಿ ವಂಚಿಸಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!