- Advertisement -
- Advertisement -
ಬೆಳ್ತಂಗಡಿ : ಉಕ್ರೇನ್ ನಲ್ಲಿ ಸಿಲುಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಟಿ.ಬಿ.ಕ್ರಾಸ್ ನಿವಾಸಿಯಾಗಿರುವ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ವೈದ್ಯ ವಿದ್ಯಾರ್ಥಿನಿಯಾಗಿರುವ ಹೀನಾ ಫಾತಿಮಾ ಶುಕ್ರವಾರ ರಾತ್ರಿ ಪೋಲೆಂಡ್ ವಿಮಾನ ನಿಲ್ದಾಣದಿಂದ ಹೊರಟು ಶನಿವಾರ ಬೆಳಗ್ಗೆ 7 ಗಂಟೆಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ವಿಶಾಂತ್ರಿ ಬಳಿಕ ರಾತ್ರಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದು ಭಾನುವಾರ ಬೆಳಗ್ಗೆ 7:20. ಕ್ಕೆ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ 8:22 ಕ್ಕೆ ಬಂದಿಳಿದ್ದಾರೆ.
ನಂತರ ಸಂಬಂಧಿ ಮನೆಗೆ ತೆರಳಿ ನಂತರ ಉಜಿರೆ ಮನೆಗೆ ಬರಲಿದ್ದಾರೆ ಎಂದು ವೈದ್ಯ ವಿಧ್ಯಾರ್ಥಿನಿ ಹೀನಾ ಫಾತಿಮಾರ ತಾಯಿ ಶಹನಾ “ಮಹಾ ಎಕ್ಸ್ಪ್ರೆಸ್ “ಗೆ ತಿಳಿಸಿದ್ದಾರೆ.
- Advertisement -